ಮದ್ರಾಸಗಳು: ರಷ್ಯಾದ ಉಜ್ಬೆಕಿಸ್ತಾನದ ಅರಸ ನಿಜಾಮ್ ಎ ಮಾಲಿಕ್ ಎಂಬವನು ಸಮರ್ಖಂಡ್ ನಗರದಲ್ಲಿ ವಿಶ್ವದಲ್ಲೇ
ಪ್ರಖ್ಯಾತವಾದ ಅತೀದೊಡ್ಡ ಮದ್ರಸಾವನ್ನು ಸ್ಥಾಪಿಸಿದ್ದ. ಅದರಲ್ಲಿ ದೇಶವಿದೇಶದಿಂದ ಜ್ಞಾನಾರ್ಜನೆಗಾಗಿ
ವಿದ್ಯಾರ್ಥಿಗಳು ಬರುತ್ತಿದ್ದರು. ಇಲ್ಲಿ ಅನೇಕ ದೊಡ್ಡ ಆಲಿಮ್ ವಿದ್ವಾಂಸರು ಮಕ್ಕಳಿಗೆ ವಿದ್ಯಾದಾನ
ಮಾಡುತ್ತಿದ್ದರು. ಇಂದು ನಮ್ಮ ದೇಶದಲ್ಲಿ ಲಕ್ಷಾಂತರ
ಕುರಾನ್, ಧಾರ್ಮಿಕ ತತ್ವಶಾಸ್ತ್ರ ಅಥವಾ ದೀನಿಯಾತ್ ಕಲಿಸುವ ಪಾಠಶಾಲೆ ಅಥವಾ ಮದ್ರಸಾಗಳು ಕಾರ್ಯೋನ್ಮುಖವಾಗಿವೆ.
ಇವುಗಳು ಸಾಮಾನ್ಯ ಮುಸ್ಲಿಮರ ಮಕ್ಕಳಿಗೆ ಪ್ರಾಥಮಿಕ ಮಟ್ಟದ ಧಾರ್ಮಿಕ ಜ್ಞಾನವನ್ನು ಕೊಡುವುದು ಮಾತ್ರವಲ್ಲ,
ಪೂರ್ಣಪ್ರಮಾಣದ ಮುಫ್ತಿ, ಮೌಲವಿ, ಹಾಫಿಸ್ಗಳನ್ನು ತಯಾರು ಮಾಡುತ್ತವೆ. ಸಾಮಾನ್ಯವಾಗಿ ಶಾಲೆಗಳಿಗೆ
ಹೋಗುವ ಮಕ್ಕಳು ಬೆಳಿಗ್ಗೆ ಶಾಲೆ ಶುರುವಾಗುವುದಕ್ಕೆ ಮೊದಲು ಒಂದು ಗಂಟೆ ಮತ್ತು ಸಂಜೆ ಶಾಲೆ ಬಿಟ್ಟನಂತರ
ಒಂದು ಗಂಟೆ ಈ ಮದ್ರಸಾಗಳಿಗೆ ಹೋಗಿ ಧಾರ್ಮಿಕ ಪಾಠಗಳನ್ನು ಕಲಿಯುತ್ತಾರೆ. ಈ ಮದ್ರಸಾಗಳನ್ನು
ವಿಶ್ವವಿದ್ಯಾಲಯಗಳೆಂದು ಪರಿಗಣಿಸುವುದು. ಮಾನ್ಯತೆ ನೀಡುವುದರ ಬಗ್ಗೆ ಬಹಳಷ್ಟು ಪರ ವಿರೋಧಿ ಚರ್ಚೆಗಳು
ನಡೆಯುತ್ತಲೇ ಇವೆ. ಇಸ್ಲಾಮಿಕ್ ಧಾರ್ಮಿಕ ವಿಷಯಗಳ ಬಗ್ಗೆ ಅರ್ಹರಿಗೆ ಡಾಕ್ಟರೇಟ್ ಪದವಿಯನ್ನು ನೀಡುವುದಕ್ಕೆ
ಸಂಬಂಧಿಸಿದಂತೆ ವಿರೋಧವಿಲ್ಲವಾದರೂ, ಇತರ ಸಾಮಾನ್ಯ ವಿಷಯಗಳನ್ನು ಆರಿಸಿಕೊಳ್ಳುವುದಕ್ಕೆ ಇರುವ ಕೊರತೆಯನ್ನು
ಮುಂದಿರಿಸಿ ಭಿನ್ನಾಭಿಪ್ರಾಯಗಳು ತಲೆಯೆತ್ತುತ್ತಿವೆ. ಈ ಮದ್ರಸಾಗಳು ಹೆಚ್ಚಾಗಿ ಸ್ವಾಯತ್ತ ಸಂಸ್ಥೆಗಳಾಗಿದ್ದು
ಸರಕಾರದ ಆರ್ಥಿಕ ಸಹಾಯವನ್ನು ಪಡೆಯದೆ ವಕ್ಫ್ ಮತ್ತು ಸ್ಥಳೀಯ ದಾನಿಗಳ ನೆರವಿನಿಂದ ನಡೆಯುತ್ತಿರುವುದರಿಂದ
ಇವು ತಮ್ಮದೇ ಆದ ನಿಯಮಗಳನ್ನು ಪಾಲಿಸುತ್ತಿರುವುದು ಕೂಡ ಒಂದುರೀತಿಯಲ್ಲಿ ಅಡಚಣೆಯುಂಟಾಗಿವೆ. ಇವಲ್ಲದೆ
ಈ ಮದ್ರಸಾಗಳಲ್ಲಿ ಕೆಲವು ದಾನಿಗಳು ವೈಯಕ್ತಿಕವಾಗಿ ನಡೆಸುವ ಯತೀಮ್ಖಾನಾಗಳು ಇಂದು ಪ್ರತೀ ಊರಲ್ಲೂ
ಹಲವಾರು ತಲೆಯೆತ್ತಿವೆ. ಇವು ಅನಾಥ ಮುಸ್ಲಿಮ್ ಮಕ್ಕಳಿಗೆ ಮದ್ರಸಾ ವಿದ್ಯಾಭ್ಯಾಸವನ್ನು, ಬಟ್ಟೆ, ಊಟ
ವಸತಿಗಳನ್ನು ಒದಗಿಸಿಕೊಡುವ ಕೆಲಸ ಮಾಡುತ್ತಿವೆ. ಈ ಮದ್ರಸಾಗಳ ಪೈಕಿ ಕೆಲವು ಒಳಗೊಳಗೆ ಈ ಅನಾಥ ಮಕ್ಕಳನ್ನು
ದುಡಿಸಿಕೊಂಡು ಶೋಷಿಸುತ್ತಿರುವ ಬಗ್ಗೆ ಕೆಲವು ಪತ್ರಿಕೆಗಳು(ಮುಖ್ಯವಾಗಿ ತೆಹಲ್ಕಾ) ವರದಿಮಾಡಿದ್ದೂ
ಇದೆ.
ವಾಟರ್ಗೇಟ್: ರಿಚರ್ಡ್ ಮಿಲ್ಹೌಸ್ ನಿಕ್ಸನ್ (ಜನವರಿ ೯, ೧೯೧೩ – ಏಪ್ರಿಲ್ ೨೨, ೧೯೯೪) ಅಮೇರಿಕ ಸಂಯುಕ್ತ ಸಂಸ್ಥಾನದ ೩೭ನೇ ರಾಷ್ಟ್ರಪತಿಯಾಗಿದ್ದವರು. ವಿಯೆಟ್ನಾಂಯುದ್ಧ ಹಾಗೂ ರಷ್ಯಾ-ಚೀನಾ ಸಂಬಂಧ ಸುಧಾರಣೆಯಲ್ಲಿ ಇವರು ಮಹತ್ತರ ಪಾತ್ರ ನಿರ್ವಹಿಸಿದರು. ವಾಟರ್ಗೇಟ್ ಪ್ರಕರಣದಿಂದ ಇವರು ಪದವಿಯಿಂದ
ರಾಜಿನಾಮೆ ನೀಡಬೇಕಾಯಿತು. ಇವರು ಅದಕ್ಕೆ ಮುಂಚೆ ೩೬ನೇ ಅಮೇರಿಕ ದೇಶದ ಉಪ ರಾಷ್ಟ್ರಪತಿ ಕೂಡ ಆಗಿದ್ದರು. 1972 ರಿಂದ 1974ರವರೆಗೆ ಅಮೆರಿಕದಲ್ಲಿ ಬೆಳಕಿಗೆ ಬಂದ ವಾಟರ್ಗೇಟ್
ಹಗರಣಕ್ಕೆ ಸಂಬಂಧಪಟ್ಟ ಮಾಹಿತಿಗಳು ಚುನಾವಣಾ ಅಕ್ರಮದಲ್ಲಿ ಮಾತ್ರವಲ್ಲ, ಬೇಹುಗಾರಿಕೆಯಲ್ಲಿಯೂ ಅಮೆರಿಕದ
ರಾಜಕಾರಣಿಗಳೇನೂ ಹಿಂದುಳಿದಿಲ್ಲ ಎನ್ನುವುದನ್ನು ಸಾಬೀತುಗೊಳಿಸಿತು. ಗೆಲ್ಲಬೇಕು, ಹೇಗಾದರೂ ಗೆಲ್ಲಬೇಕು;
ಎದುರಾಳಿ ಹಾಕುವ ಪಟ್ಟಿಗೆ ಪ್ರತಿಪಟ್ಟು ಹಾಕಲೇಬೇಕು ಎಂದು ಹೊರಡುವ ರಾಜಕಾರಣಿ ಎಷ್ಟೊಂದು ಕಳಂಕ ಹೊತ್ತು
ನಿರ್ಗಮಿಸಬೇಕಾಗುತ್ತದೆ ಎನ್ನುವುದಕ್ಕೆ ಈ ಹಗರಣವೊಂದು ಉತ್ತಮ ಉದಾಹರಣೆ.
ಜತೆಗೆ ಕದ್ದಾಲಿಕೆ
ಏನು ಎನ್ನುವುದನ್ನು ಅದು ಜಗತ್ತಿಗೆ ತಿಳಿಸಿತು.ಈ ಹಗರಣದ ಕೇಂದ್ರ ಬಿಂದು ಅಧ್ಯಕ್ಷ ರಿಚರ್ಡ್ ನಿಕ್ಸನ್.
ಹಗರಣದಿಂದ ತಪ್ಪಿಸಿಕೊಳ್ಳಲು ಅಸಾಧ್ಯ ಎನ್ನುವಷ್ಟು ಬಿಗುವಾದ ತನಿಖೆ ಮತ್ತು ತನಿಖಾ ಪತ್ರಿಕೋದ್ಯಮ
ಅವರ ರಾಜಕೀಯ ಬದುಕಿಗೆ ನೇಣು ಬಿಗಿಯುವಂತೆ ಮಾಡಿತು. ಕದ್ದಾಲಿಕೆಯ ಕಳಂಕ ಹೊತ್ತು ರಾಜೀನಾಮೆ ನೀಡಿದ
ಮೊದಲನೆಯ ಅಧ್ಯಕ್ಷ ಎಂಬ ಅಪಖ್ಯಾತಿ ಅವರಿಗೆ ಅಂಟಿಕೊಂಡಿತು. ‘ವಾಟರ್ಗೇಟ್' ವಾಷಿಂಗ್ಟನ್ನಲ್ಲಿರುವ
ಹೋಟೆಲ್ ಒಳಗೊಂಡ ಸಮುಚ್ಚಯದ ಹೆಸರು. 1972ರಲ್ಲಿ ಅಮೆರಿಕ ಅಧ್ಯಕ್ಷರ ಚುನಾವಣೆಯ ಸಂದರ್ಭದಲ್ಲಿ ಡೆಮಾಕ್ರಟಿಕ್
ಪಕ್ಷದ ರಾಷ್ಟ್ರೀಯ ಸಮಿತಿಯ ಕೇಂದ್ರ ಕಚೇರಿ ಅಲ್ಲಿ ಇತ್ತು. ರಿಪಬ್ಲಿಕನ್ ಪಕ್ಷದಿಂದ ರಿಚರ್ಡ್ ನಿಕ್ಸನ್
ಆಗ ಎರಡನೇ ಬಾರಿಗೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು. (ಎರಡು ಬಾರಿ ಅಮೆರಿಕದ ಉಪಾಧ್ಯಕ್ಷರಾಗಿದ್ದ
ಅವರು ಒಮ್ಮೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜಾನ್ ಎಫ್ ಕೆನಡಿ ಅವರಿಂದ ಸೋಲುಂಡಿದ್ದರು). ನಿಕ್ಸನ್
ಅವರಿಗೆ ಡೆಮಾಕ್ರಟಿಕ್ ಪಕ್ಷದ ಚುನಾವಣಾ ಕಾರ್ಯತಂತ್ರವನ್ನು ಕದ್ದು ತಿಳಿದುಕೊಳ್ಳುವ ಕೆಟ್ಟ ಕುತೂಹಲ
ವಿನಾಶಕಾರಿ ಗಳಿಗೆಯೊಂದರಲ್ಲಿ ಮೂಡಿತು. ಇದು ಯಾರೂ ಊಹಿಸದೇ ಇದ್ದ ದೊಡ್ಡ ಹಗರಣಕ್ಕೆ ಕಾರಣವಾಯಿತು.
ರಿಪಬ್ಲಿಕನ್ ಪಕ್ಷದಿಂದ ನೇಮಕಗೊಂಡ ಐವರು ವ್ಯಕ್ತಿಗಳು 1972 ಜೂನ್ 17ರಂದು ಬೇಹುಗಾರಿಕೆಯ ಉದ್ದೇಶದಿಂದ
ಎಲೆಕ್ಟ್ರಾನಿಕ್ಸ್ ಸಾಧನಗಳೊಂದಿಗೆ ವಾಟರ್ಗೇಟ್ ಕಟ್ಟಡದಲ್ಲಿರುವ ಡೆಮಾಕ್ರಟಿಕ್ ಪಕ್ಷದ ರಾಷ್ಟ್ರೀಯ
ಸಮಿತಿಯ ಕೇಂದ್ರ ಕಚೇರಿ ಪ್ರವೇಶಿಸಿದಾಗ ಫ್ರಾಂಕ್ವಿಲ್ಸ್ ಎಂಬ ಭದ್ರತಾ ಸಿಬ್ಬಂದಿ ಅವರನ್ನು ಸೆರೆಹಿಡಿದ.
ಅನಂತರ ವಿಚಾರಣೆ ನಡೆಸಿದಾಗ ಇನ್ನೂ ಇಬ್ಬರ ಪಾತ್ರ ಕೂಡ ಬೆಳಕಿಗೆ ಬಂತು. ಅವರ ಬಳಿ ನೂರಾರು ಡಾಲರ್
ನಗದು ಹಣ ಇದ್ದುದು ಪತ್ತೆಯಾಯಿತು. ಬಂಧಿತರ ಮೇಲೆ ಕಳವು ಯತ್ನದ ಪ್ರಕರಣ ದಾಖಲಾದರೂ ಅವರ ಉದ್ದೇಶ ಬೇರೆಯೇ
ಆಗಿತ್ತು.
ರಾಜಕೀಯ ಪಿತೂರಿಯ ಭಾಗವಾಗಿ
ಅವರು ಪ್ರವೇಶಿಸಿದ್ದರು ಎನ್ನುವುದು ಅನಂತರ ಬೆಳಕಿಗೆ ಬಂತು. ಬ್ಯಾಂಕು ಖಾತೆಗಳನ್ನು ಪರಿಶೀಲಿಸಿದಾಗ
ಅವರ ಆದಾಯಕ್ಕೂ, ಖಾತೆಯಲ್ಲಿ ಇ್ದ್ದದ ಹಣಕ್ಕೂ ತಾಳೆಯಾಗದೆ ಅವರು ಪ್ರಚಂಡರು ಎನ್ನುವುದು ಗೊತ್ತಾಯಿತು.
ಒಟ್ಟು ಏಳು ಜನರು ಬಲೆಗೆ ಬಿದ್ದ ಬಳಿಕ ಅವರೆಲ್ಲರೂ ನೇರವಾಗಿ ಅಥವಾ ಪರೋಕ್ಷವಾಗಿ ನಿಕ್ಸನ್ ಪುನರಾಯ್ಕೆ
ಸಮಿತಿಗೆ ಸಂಬಂಧಪಟ್ಟವರು ಎನ್ನುವುದು ಗೊತ್ತಾಯಿತು.ಆದರೆ ಇದಕ್ಕೂ ಮುನ್ನ ವಾಟರ್ಗೇಟ್ ಕಟ್ಟಡವನ್ನು
ಅಕ್ರಮವಾಗಿ ಪ್ರವೇಶಿಸುವ ಪ್ರಯತ್ನಗಳು ನಡೆದು ಒಮ್ಮೆ ಒಬ್ಬಾತ ಸಿಕ್ಕಿ ಬಿದ್ದಿದ್ದ. ಅವನಿಗೆ ಭದ್ರತಾ
ಸಿಬ್ಬಂದಿ ಎಚ್ಚರಿಕೆ ನೀಡಿ ಕಳುಹಿಸಿದ್ದರು.
ಉಳಿದ ಮೂವರು ಒಳಗೆ
ಪ್ರವೇಶಿಸಿ ಕದ್ದಾಲಿಕೆ ಉಪಕರಣ ಜೋಡಿಸುವುದರಲ್ಲಿ ಯಶಸ್ವಿಯಾಗಿದ್ದರು. ಮಾಧ್ಯಮಗಳ ಪಾತ್ರ: ವಾಟರ್ಗೇಟ್
ಹಗರಣ ಅಧಿಕಾರದಲ್ಲಿದ್ದವರ ಪ್ರಭಾವದಿಂದ ಮುಚ್ಚಿ ಹೋಗದಂತೆ ನೋಡಿಕೊಂಡವರು ಪತ್ರಕರ್ತರು. ವಾಟರ್ಗೇಟ್ನ
ವಿಚಾರಣೆಯ ಮೇಲೆ ಭಾರಿ ಪರಿಣಾಮ ಬೀರಿದ್ದು ಮಾಧ್ಯಮಗಳ ವಿಶೇಷ ವರದಿಗಳು. `ಟೈಮ್', `ನ್ಯೂಯಾರ್ಕ್ ಟೈಮ್ಸ' ಮತ್ತು ಮುಖ್ಯವಾಗಿ `ವಾಷಿಂಗ್ಟನ್ ಪೋಸ್ಟ್ ಪತ್ರಿಕೆ'- ತನಿಖಾ ವರದಿಗಳಿಂದ ಜನರ ಗಮನ ಸೆಳೆದವು. `ವಾಷ್ಟಿಂಗ್ಟನ್ ಪೋಸ್ಟ್' ಪತ್ರಿಕೆಯ ಇಬ್ಬರು ವರದಿಗಾರರಾದ ಬಾಬ್ ವುಡ್ವರ್ಡ್ ಮತ್ತು ಕಾರ್ಲ್ ಬರ್ನ್ಸ್ಟೈನ್ ಅವರ ಶೋಧನಾತ್ಮಕ ವರದಿಗಳನ್ನು ಜನರು ಕುತೂಹಲದಿಂದ ಎದುರು ನೋಡುವಂತೆ ಮಾಡಿತು.ಅವರಿಗೆ ಮಾಹಿತಿ ನೀಡಿದ್ದು `ಡೀಪ್ಥ್ರೋಟ್' ಎಂಬ ನಿಗೂಢ ಮಾಹಿತಿದಾರ. ಈ ಮಾಹಿತಿದಾರ ಯಾರು ಎನ್ನುವುದನ್ನು 2005ರಲ್ಲಿ ಬಾಬ್ ವುಡ್ವರ್ಡ್ `ವಾಷಿಂಗ್ಟನ್ ಪೋಸ್ಟ್' ಪತ್ರಿಕೆಯ ಜೂನ್ 2ರ ಸಂಚಿಕೆಯಲ್ಲಿ ಬಹಿರಂಗಪಡಿಸಿದರು. `ಡೀಪ್ ಥ್ರೋಟ್ ' ಎಂದರೆ ಎಫ್ಬಿಐಯಲ್ಲಿ (ಫೆಡರಲ್ ತನಿಖಾ ಸಂಸ್ಥೆ) ಪ್ರಮುಖ ಮೂರನೆಯ ಸ್ಥಾನದಲ್ಲಿದ್ದ ಮಾರ್ಕ್ಫೆಲ್ಟ್ ಎಂದು ಅವರು ತಿಳಿಸಿದಾಗ ಬೆರಗಾಗುವ ಸರದಿ ಜನರದ್ದು. ಹಿಂದೊಮ್ಮೆ ನೌಕಾ ಪಡೆಯಲ್ಲಿದ್ದ ಲೆಫ್ಟಿನೆಂಟ್ ವುಡ್ವರ್ಡ್ ಮೊತ್ತ ಮೊದಲ ಬಾರಿಗೆ ಮಾರ್ಕ್ಫೆಲ್ಟ್ ಅವರನ್ನು ಭೇಟಿಯಾದುದು ಶ್ವೇತ ಭವನದಲ್ಲಿ. ವುಡ್ವರ್ಡ್ ಅಂದಿನ ಪರಿಚಯದ ಲಾಭ ಪಡೆದದ್ದು `ವಾಷಿಂಗ್ಟನ್ ಪೋಸ್ಟ್' ಪತ್ರಿಕೆಯನ್ನು ವರದಿಗಾರರಾಗಿ ಸೇರಿದಾಗ. ಮೊದಲ ಬಾರಿ ಭೇಟಿಯಾದಾಗ ಅವರ ಖಾಸಗಿ ದೂರವಾಣಿಯ ಸಂಖ್ಯೆ ಪಡೆದ ಕಾರಣ ಅನಂತರದ ದಿನಗಳಲ್ಲಿ ನೇರ ಸಂಪರ್ಕ ಸಾಧ್ಯವಾಯಿತು.ಫೆಲ್ಟ್
ಅವರಿಗೆ ಬಡ್ತಿಯ ಸಂದರ್ಭದಲ್ಲಿ ಅನ್ಯಾಯವಾದುದರ ನೋವು ಮತ್ತು ಅಧ್ಯಕ್ಷ ನಿಕ್ಸನ್ ಎಫ್ಬಿಐಯನ್ನು ರಾಜಕೀಯ
ಕಾರಣಕ್ಕೆ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂಬ ಸಿಟ್ಟು ವುಡ್ವರ್ಡ್ಗೆ ರಹಸ್ಯ ಮಾಹಿತಿ ನೀಡುವಂತೆ
ಪ್ರೇರೇಪಿಸಿತು.
ಹಗರಣದ ಮಾಹಿತಿಗಾಗಿ ಒಮ್ಮೆ ರಾತ್ರಿ ಫೆಲ್ಟ್ ಅವರ ಮನೆಗೆ ವುಡ್ವರ್ಡ್ ಬಂದಾಗ `ಇನ್ನು ಮುಂದೆ
ಮನೆಗೆ ಬರಬೇಡಿ, ಫೋನೂ ಮಾಡಬೇಡಿ. ಬಹಿರಂಗವಾಗಿ ಏನೂ ಬೇಡ' ಎಂದರು. ಆದರೆ ಪರಸ್ಪರ ಭೇಟಿಯಾಗುವುದನ್ನು
ತಪ್ಪಿಸದೆ ಮಾಹಿತಿ ಹಸ್ತಾಂತರಕ್ಕೆ ತಮ್ಮದೇ ಆದ ವಿಧಾನ ಕಂಡುಕೊಂಡರು. ಇದರಂತೆ ವುಡ್ವರ್ಡ್ ಅವರು
ಫೆಲ್ಟ್ ಅವರನ್ನು ಭೇಟಿಯಾಗಬಯಸಿದಾಗಲೆಲ್ಲ ಅವರ ಮನೆಯ ಖಾಲಿ ಹೂಕುಂಡದಲ್ಲಿ ಕೆಂಪು ಬಾವುಟವೊಂದನ್ನು
ಇರಿಸಿ ಬರುತ್ತಿದ್ದರು. ಫೆಲ್ಟ್ ತಮ್ಮನ್ನು ವುಡ್ವರ್ಡ್ ಅವರು ಭೇಟಿಯಾಗಲು ಸೂಚಿಸುತ್ತಿದ್ದ ವಿಧಾನ
ಇನ್ನೂ ಸ್ವಾರಸ್ಯಕರ.
`ನ್ಯೂಯಾರ್ಕ್ ಟೈಮ್ಸ' ಪತ್ರಿಕೆಯ ಪುಟ 20ರಲ್ಲಿ ಪುಟ ಸಂಖ್ಯೆ 20 ಎಂದು ಬರೆದಲ್ಲಿ ಸುತ್ತ ವೃತ್ತ
ಎಳೆದು ಪುಟದ ಕೊನೆಯಲ್ಲಿ ಗಡಿಯಾರದ ಚಿತ್ರ ಬರೆದು ಗಡಿಯಾರದ ಮುಳ್ಳು ಭೇಟಿಯಾಗಬೇಕಾದ ಸಮಯ ಸೂಚಿಸುತ್ತಿರುವಂತೆ
ಚಿತ್ರಿಸಿ ಆ ಪತ್ರಿಕೆಯನ್ನು ಅವರ ಮನೆ ಮುಂದೆ ಇರಿಸಿ ಬರುತ್ತಿದ್ದರು. ಈ ರೀತಿ ಪರಸ್ಪರ ಭೇಟಿ ಗುಪ್ತವಾಗಿ
ನಡೆದು ಸ್ಫೋಟಕ ಮಾಹಿತಿ ಪತ್ರಿಕೆಗಳಲ್ಲಿ ಪ್ರಕಟವಾಗಿ ಹಗರಣ ಬಯಲಾಯಿತು. ಸ್ವಾರಸ್ಯಕರ ವಿಷಯ ಎಂದರೆ
ಹಗರಣ ಬಯಲಿಗೆ ಬರುವ ಮುನ್ನ ಶ್ವೇತಭವನ ಮತ್ತು ರಕ್ಷಣಾ ಇಲಾಖೆಗೆ ಸೇರಿದ 13 ಅಧಿಕಾರಿಗಳ ದೂರವಾಣಿ
ಕರೆಗಳ ಕದ್ದಾಲಿಕೆ ನಡೆದಿತ್ತು. ಅಲ್ಲದೆ ಒಬ್ಬ ವಿದೇಶಿ ಮತ್ತು ಅಮೆರಿಕದ ಮೂವರು ಪತ್ರಕರ್ತರ ದೂರವಾಣಿ
ಕದ್ದಾಲಿಕೆ ಕೂಡ ನಡೆದಿತ್ತು. ತನಿಖೆಗೆ ಸಮಿತಿ: ಸೆನೆಟ್,
ವಾಟರ್ಗೇಟ್ ಹಗರಣದ ತನಿಖೆಗೆ ಸಮಿತಿಯೊಂದನ್ನು ರಚಿಸಿತು. ನಿಗೂಢವಾಗಿ ಧ್ವನಿ ಮುದ್ರಿಸಿದ ಟೇಪ್ಗಳನ್ನು
ಈ ಸಮಿತಿ ಬೆಳಕಿಗೆ ತಂದಾಗ ಕಾಂಗ್ರೆಸ್ ಮತ್ತು ನಿಕ್ಸನ್ ಮಧ್ಯೆ ಕದನ ತೀವ್ರಗೊಂಡಿತು. 1973ರ ಏಪ್ರಿಲ್
30ರಂದು ತಮ್ಮ ಹಿರಿಯ ಸಹಾಯಕರಾದ ಎಚ್.ಆರ್. ಹಾಲ್ಡೆಮನ್ ಮತ್ತು ಜಾನ್ ಎಲ್ರಿಚ್ಮನ್ ರಾಜೀನಾಮೆ ನೀಡಲು
ಒತ್ತಡ ಹೆಚ್ಚಿದ ಕಾರಣ ನಿಕ್ಸನ್ ರಾಜೀನಾಮೆ ಕೇಳಬೇಕಾಯಿತು. ಕೊನೆಗೆ ಇವರಿಬ್ಬರು ಅಪರಾಧ ಸಾಬೀತಾದ
ಕಾರಣ ಸೆರೆಮನೆ ಸೇರಬೇಕಾಯಿತು. ಶ್ವೇತಭವನದ ವಕೀಲ ಜಾನ್ಡೀನ್ ಹುದ್ದೆಯಿಂದ ಹೊರಹಾಕಲ್ಪಟ್ಟರು. ಆದರೆ
ಅವರು ನಿಕ್ಸನ್ರಿಗೆ ಪ್ರತಿಕೂಲ ಸಾಕ್ಷಿಯಾಗಿ ಸಮಸ್ಯೆ ತಂದಿಟ್ಟರು.1974ರಲ್ಲಿ ನಿಕ್ಸನ್ ವಿರುದ್ಧ
ವಾಗ್ದಂಡನೆಗೆ ಕಾಂಗ್ರೆಸ್ ಸಮ್ಮತಿ ನೀಡಿತು. ಆಗ ಡೆಮಾಕ್ರಟಿಕ್ ಪಕ್ಷದ ಜತೆ ರಿಪಬ್ಲಿಕನ್ ಪಕ್ಷದ ಸದಸ್ಯರೂ
ಮತ ನೀಡಿದರು. ಶ್ವೇತಭವನ ಗುಪ್ತವಾಗಿ ದಾಖಲಿಸಿದ್ದ 64 ಟೇಪ್ಗಳನ್ನು ಬಿಡುಗಡೆ ಮಾಡುವಂತೆ ಸುಪ್ರೀಂ
ಕೋರ್ಟ್ ಆದೇಶಿಸಿದ್ದು ನಿಕ್ಸನ್ ಅವರನ್ನು ಇನ್ನಷ್ಟು ಪೇಚಿಗೆ ಸಿಲುಕಿಸಿತು. ಈ ಟೇಪ್, ವಾಟರ್ಗೇಟ್
ಹಗರಣದಲ್ಲಿ ನಿಕ್ಸನ್ ಅವರ ನೇರ ಪಾತ್ರ ಇತ್ತು ಎನ್ನುವುದನ್ನು ಸಾಬೀತುಗೊಳಿಸಿತು.
ಪ್ರಾರಂಭದಲ್ಲಿ ಟೇಪ್ ಬಿಡುಗಡೆಗೆ ನಿಕ್ಸನ್ ಮೀನ ಮೇಷ ಎಣಿಸಿದರು. ಅದರ ಸಾರಾಂಶ ಮಾತ್ರ ಬಿಡುಗಡೆ ಮಾಡುವುದಾಗಿ
ಹೇಳಿದರು. ಅದರ ಕೆಲವು ಅಂಶಗಳು ಆಕಸ್ಮಿಕವಾಗಿ ಅಳಿಸಲ್ಪಟ್ಟಿವೆ ಎಂದು ಶ್ವೇತಭವನ ಹೇಳಿತು.ಡೆಮಾಕ್ರಟಿಕ್
ಪಕ್ಷದ ಕಚೇರಿ ಪ್ರವೇಶಿಸಿದವರ ಬಳಿ ಇದ್ದ ಹಣದ ಮೂಲದ ಬಗ್ಗೆ ಎಫ್ಬಿಐ ತನಿಖೆಗೆ ಕೈಗೆತ್ತಿಕೊಂಡಿದ್ದು
ಅದಕ್ಕೆ ಸಿಐಎಯಿಂದ (ಅಮೆರಿಕದ ಕೇಂದ್ರೀಯ ಬೇಹುಗಾರಿಕೆ ದಳ) ಅಡ್ಡಗಾಲು ಹಾಕಿಸುವಂತೆ ಹಾಲ್ಡೆಮನ್ಗೆ
ಸೂಚಿಸಿರುವುದರ ಬಗ್ಗೆ ಪ್ರಸ್ತಾಪ ಇರುವ ಟೇಪ್ ಬಿಡುಗಡೆ ಮಾಡುವಂತೆ ಕೋರ್ಟ್ ನಿಕ್ಸನ್ಗೆ ಕಟುವಾಗಿ
ಆದೇಶಿಸಿತು. ನಂತರ ತೀವ್ರ ಗತಿಯ ಬೆಳವಣಿಗೆಗಳು ಆಗಿ ಆಗಸ್ಟ್ 8ರಂದು ನಿಕ್ಸನ್ ಟಿ.ವಿ ಭಾಷಣದಲ್ಲಿ
ತಾವು ರಾಜೀನಾಮೆ ನೀಡುವುದಾಗಿ ಪ್ರಕಟಿಸಿ ಮರುದಿನ ರಾಜೀನಾಮೆ ನೀಡಿದರು. ಅನಂತರ ಅಧ್ಯಕ್ಷರಾದ ಗೆರಾಲ್ಡ್
ಫೋರ್ಡ್ ಅವರು ನಿಕ್ಸನ್ಗೆ ಕ್ಷಮಾದಾನ ನೀಡಿದರು. ನಿಕ್ಸನ್ 1994 ರಲ್ಲಿ ನಿಧನರಾದರು. ಅವರು ತಮ್ಮ
ಕೊನೆಯ ಕ್ಷಣದವರೆಗೆ ತಾವು ಅಮಾಯಕ ಎಂದೇ ಹೇಳಿಕೊಂಡರು.
ಆಳ್ವಾರರು (‘ದೇವರಲ್ಲಿ ಮುಳುಗಿದವರು’) ಕ್ರಿ.ಶ. ೬ನೇ ಮತ್ತು ೯ನೇ ಶತಮಾನಗಳ ನಡುವೆ ಬದುಕಿದ್ದ ಮತ್ತು
ಹಾತೊರೆತ, ಭಾವಪರವಶತೆ ಹಾಗು ಸೇವೆಯ ತಮ್ಮ ಹಾಡುಗಳಲ್ಲಿ ವಿಷ್ಣು-ಕೃಷ್ಣನಿಗೆ ಭಾವನಾತ್ಮಕ ಭಕ್ತಿಯನ್ನು ಸಮರ್ಥಿಸಿದ್ದ ತಮಿಳು ಕವಿಸಂತರಾಗಿದ್ದರು.
ವೈಷ್ಣವ ಸಾಂಪ್ರದಾಯಿಕತೆಯು ಆಳ್ವಾರರ ಸಂಖ್ಯೆ ಹತ್ತೆಂದು ಹೇಳುತ್ತದೆ, ಆದರೆ ಅಂಡಾಳ್ ಹಾಗು ಮಧುರಕವಿಯನ್ನು
ಒಳಗೊಳ್ಳುವ ಇತರ ಉಲ್ಲೇಖಗಳು ಇವೆ, ಹೀಗೆ ಸಂಖ್ಯೆ ಹನ್ನೆರಡಾಗುತ್ತದೆ. ತಮಿಳು
ಇತಿಹಾಸದ ಮಧ್ಯ ಯುಗದ
ಆರಂಭದಲ್ಲಿ ರಚಿತವಾಗಿದ್ದ ಆಳ್ವಾರರ ಭಕ್ತಿ ಭಾವಪ್ರವಾಹವು ಭಕ್ತಿ ಚಳುವಳಿ ಪುನರುಜ್ಜೀವನಗೊಳ್ಳಲು ನೆರವಾಯಿತು
ಸನಾತನ ಧರ್ಮ ಮಸಕಾಗುತ್ತಿದ್ದ
ಸಂಧಿಕಾಲದಲ್ಲಿ ತಮಿಳುನಾಡಿನಲ್ಲಿ ಭಕ್ತಿಯ ಆವೇಶವನ್ನು ಹುಟ್ಟಿಸಿ ಶ್ರೀವೈಷ್ಣವ ಮತವನ್ನು ಪ್ರಚಾರ
ಮಾಡಿದವರು ಆಳ್ವಾರರು. ಆಳ್ವಾರರು ಎಂದರೆ ಭಕ್ತಿ ಸಾಗರದಲ್ಲಿ ಮುಳುಗುವವರು ಎಂದರ್ಥ. ಸುಮಾರು ಏಳನೆಯ
ಶತಮಾನದಲ್ಲಿ ಕಾಣಿಸಿಕೊಂಡ ಪೊಯ್ಗೈ ಆಳ್ವಾರರು, ಭೂತತ್ತಾಳ್ವಾರರು ಮತ್ತು ಪೇಯ್ ಆಳ್ವಾರರು ಮೊದಲ
ಆಳ್ವಾರರೆಂದೇ ಪ್ರಸಿದ್ಧರು. ಪೊಯ್ಗೈ ಆಳ್ವಾರರು ಶ್ರೀವಿಷ್ಣುವಿನ ಪಾಂಚಜನ್ಯ ಶಂಖದ ಅಂಶದವರು, ಭೂತತ್ತಾಳ್ವರರು
ವಿಷ್ಣುವಿನ ಕೌಮೋದಕೀ ಗದೆಯ ಅಂಶದಿಂದ ಬಂದವರು ಹಾಗೂ ಪೇಯ್ ಆಳ್ವಾರರು ವಿಷ್ಣುವಿನ ಖಡ್ಗವಾದ ನಂದಕಿಯ
ಅಂಶದಿಂದ ಬಂದವರು ಎಂಬ ನಂಬಿಕೆ. ಮೂವರೂ ಆಳ್ವಾರರು ಭಗವಂತನ ಹಿರಿಮೆಯ ಬಗ್ಗೆ ಸುಂದರವಾದ ಕೀರ್ತನೆಗಳನ್ನು
ಬರೆದು ಹಾಡಿ ಊರಿಂದ ಊರಿಗೆ ಸಂಚರಿಸಿ ಭಕ್ತಿ ಪ್ರಸಾರ ಮಾಡುತ್ತಿದ್ದರು. ಆಳ್ವಾರರು ಭಕ್ತಿಯ ಸಾಗರದಲ್ಲಿ
ಮಿಂದವರು, ಜ್ಞಾನದ ತವನಿಧಿಯಾಗಿದ್ದವರು. ಅದಲ್ಲದೇ ವಿನಯವನ್ನು ಸದಾಕಾಲ ನಡೆದು ತೋರಿದವರು. ಎಲ್ಲಿ
ಭಕ್ತಿ, ಜ್ಞಾನ ಮತ್ತು ವಿನಯದ ಸಂಗಮವಿದೆಯೋ ಅದೇ ಭಗವಂತನ ಆವಾಸ ಸ್ಥಾನ ಎಂಬುದು ಈ ಮೂವರು ಆಳ್ವಾರರ
ಜೀವನದ ಸಂದೇಶ ನಮಗೆ.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
೧೮೭೧ರಲ್ಲಿ ಐ.ಸಿ.ಎಸ್.
ಪರೀಕ್ಷೆಗೆ ಅಭ್ಯರ್ಥಿಗಳ ವಯೋಮಿತಿಯನ್ನು ೨೧ ರಿಂದ ೧೯ಕ್ಕೆ ಇಳಿಸಲಾಯಿತು. ಅವರ ಉದ್ದೇಶವು ಸ್ಪಷ್ಟ
ಭಾರತೀಯರನ್ನು ಪರೀಕ್ಷೆ, ಉದ್ಯೋಗ ದಲ್ಲಿ ಕುಂಠಿತ ಅಥವಾ ಕಡಿಮೆಗೊಳಿಸುವುದಾಗಿತ್ತು. ಭಾರತೀಯರಿಗೆ
ಉನ್ನತ ಹುದ್ದೆಗಳನ್ನು ಹೊಂದಲು ಅವಕಾಶ ಮತ್ತು ಆಡಳಿತವನ್ನು ಪ್ರಜೆಗಳ ಹತೋಟಿಯಲ್ಲಿರುವ ಪ್ರಜಾಪ್ರತಿನಿಧಿ
ಗಳು ಚಳುವಳಿ ನಡೆಸಲು ಒಂದು ಸಂಸ್ಥೆ ಅವಶ್ಯಕವಾಗಿತ್ತು. ೧೮೮೨ರಲ್ಲಿ ಅಲೆನ್ ಆಕ್ಟೇವಿ ಯನ್ ಹ್ಯೂಂ
ಎಂಬ ನಿವೃತ್ತ ಅಧಿಕಾರಿ ಕಲ್ಕತ್ತದ ವಿಶ್ವವಿದ್ಯಾಲಯದಲ್ಲಿರುವ ಪದವೀಧರ ರಿಗೆ ಒಂದು ಬಹಿರಂಗ ಪತ್ರ
ಬರೆದು “ಭಾರತೀಯರ ಸಾಮಾಜಿಕ, ನೈತಿಕ ಮತ್ತು ರಾಜಕೀಯ ಪುನರುದ್ಧಾರಕ್ಕೆ ಒಂದು ಸಂಘವನ್ನು ಸ್ಥಾಪಿಸಬೇಕೆಂದು
ಕರೆಯಿತ್ತರು. ಇದಕ್ಕೆ ಭಾರತೀಯರ, ಆಂಗ್ಲಾಧಿಕಾರಿಗಳ ಬೆಂಬಲವಿತ್ತು. ೧೮೮೫ರಲ್ಲಿ ಅಖಿಲ ಭಾರತ ರಾಷ್ಟ್ರೀಯ
ಕಾಂಗ್ರೆಸ್ ಸ್ಥಾಪನೆಯಾಯಿತು. ಅದೇ ವರ್ಷದಲ್ಲಿ ಮುಂಬಾಯಿಯಲ್ಲಿ ಡಬ್ಲ್ಯೂ.ಸಿ. ಬ್ಯಾನರ್ಜಿ ಅಧ್ಯಕ್ಷತೆಯಲ್ಲಿ
ಮೊದಲ ಅಧಿವೇಶನ ನಡೆಯಿತು. ಪ್ರಾರಂಭದಲ್ಲಿ ಬ್ರಿಟಿಷ್ ಸರ್ಕಾರಕ್ಕೆ ನಿಷ್ಠೆ ಇದು ತೋರಿಸಿತ್ತು. ಆನಂತರ
ಆವೆಲ್ಲವೂ ತದ್ವಿರುದ್ಧವಾದವು. ವಾರ್ಷಿಕಾಧಿವೇಶನ ಗಳನ್ನು ಇಂದಿನವರೆಗೂ ನಡೆಸಿಕೊಂಡು ಬಂದಿವೆ. ಅದರಲ್ಲಿ
ಒಡಕುಂಟಾಗಿ ಮಂದಗಾಮಿ, ಉಗ್ರಗಾಮಿ ಮತ್ತು ಸ್ವರಾಜ್ಯ ಪಕ್ಷ ಇತರೆ ಘಟನೆಗಳು ಸಂಭವಿಸಿದ್ದುಂಟು. ಈ ಎಲ್ಲಾ
ಘಟನೆಗಳು ನೇರವಾಗಿ ಬಳ್ಳಾರಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟದ ಮೇಲೆ ನೇರವಾಗಿ ಪ್ರಭಾವ ಬೀರದಿದ್ದರೂ,
ಪರೋಕ್ಷವಾಗಿ ಗಾಢವಾದ ಪರಿಣಾಮ ಬೀರಿರುವುದುಂಟು. ಬರಬರುತ್ತಾ ಬ್ರಿಟಿಷರು ಸಂಶಯತ್ಮಾಕ ದೃಷ್ಟಿಯಿಂದ
ವಿರೋಧಿಗಳಾದರು.
೧೮೮೫ ರಿಂದ ೧೯೪೭ರ ವರೆಗಿನ ಸ್ವಾತಂತ್ರ್ಯ
ಹೋರಾಟ
೧೮೮೫ರಲ್ಲಿ ಬಳ್ಳಾರಿ
ಜಿಲ್ಲೆಯಿಂದ ಅನಂತಪುರ ಪ್ರತ್ಯೇಕವಾಯಿತು. ಇಲ್ಲಿನ ಭೌಗೋಳಿಕ ರೇಖೆ ಸಂಕ್ಷಿಪ್ತಗೊಂಡಿತು. ಪ್ಲೇಗು
ಮತ್ತು ಬರಗಾಲಗಳಿಂದ ಜಿಲ್ಲೆಯ ಜನತೆ ಮನೆ ಮಠ ತೊರೆದು ವಲಸೆ ಜೀವನ ಪ್ರಾರಂಭಿಸಿದರು. ಅಂದು ಬಳ್ಳಾರಿ
ಜಿಲ್ಲೆಯಲ್ಲಿ ಬಹುಸಂಖ್ಯಾತ ರೆಂದರೆ ಬೇಡರು, ಕುರುಬರು, ವೀರಶೈವರು, ಬ್ರಾಹ್ಮಣರು ಮತ್ತು ವಕೀಲರುಗಳು
ಮಾತ್ರ ಕಾಂಗ್ರೆಸ್ನಲ್ಲಿದ್ದರು. ಬಳ್ಳಾರಿ ಜಿಲ್ಲೆಯಲ್ಲಿ ಮೊದಲಿನಿಂದಲೂ ಬ್ರಾಹ್ಮಣ ಮತ್ತು ಬ್ರಾಹ್ಮಣೇ
ತರ ಪರಿಷತ್ತುಗಳಿದ್ದವು. ಬ್ರಾಹ್ಮಣರು ಒಂದು ಪತ್ರಿಕೆಯನ್ನು ಪ್ರಕಟಿಸಿದರೆ, ಬ್ರಾಹ್ಮಣೇತರ ರಾದ ವೀರಶೈವರೊಂದು
ಪತ್ರಿಕೆಯನ್ನು ಹೊರಡಿಸುತ್ತಿದ್ದರು.[1] ಹೀಗಾಗಿ ಸಾಮಾನ್ಯ ಜನರನ್ನು ಸ್ವಾತಂತ್ರ್ಯ ಹೋರಾಟದಲ್ಲಿ ಕಡೆಗಣಿಸಿದರು.
ಒಮ್ಮೆ ಬಳ್ಳಾರಿಯಲ್ಲಿ
ಸರಸ ವಿನೋದಿನಿ ಸಭಾ ನಾಟಕ, ಸಂಗೀತದಂಥ ಕಲೆಗಳಿಗೆ ಒಂದು ಸಂಸ್ಥೆ ಕಟ್ಟಿ ಅದರ ಉದ್ಘಾಟನೆಗೆ ೧೯೦೫ರಲ್ಲಿ
ಬಾಲಗಂಗಾಧರ ತಿಲಕರನ್ನು ಕರೆಸ ಲಾಯಿತು. ಬಳ್ಳಾರಿಗೆ ಬಂದು ವಾಣಿವಿಲಾಸ ನಾಟಕ ಶಾಲೆಯಲ್ಲಿ ಮಾತನಾಡುತ್ತ
ತಿಲಕರು “ವಿಜಯನಗರದ ಸಾಮ್ರಾಜ್ಯ ಸ್ಥಾಪನೆಯಿಂದ ನಮಗೆ ಬಹುಲಾಭವಾಯಿತು. ಪರಕೀಯರ ದಾಳಿಯಿಂದ ರಕ್ಷಣೆ
ಪಡೆಯಲು ಯೋಗ್ಯ ಸಂಘಟನೆ ಆಯಿತು. ನಾವು ಇದರಿಂದ ಪಾಠ ಕಲಿಯಬೇಕು. ಜನ ಜಾಗೃತಿಯಾಗಿ ನಮ್ಮಲ್ಲಿ ಐಕ್ಯಮತ್ಯ
ಮೂಡಿದರೆ ಮಾತ್ರ ಉದ್ದೇಶ ಸಾಧನೆಯಾದೀತು” ಎಂದು ಹೇಳಿದರು.[2] ಜನತೆಗೆ ಇವರ ಮಾತಿನಿಂದ ಹೊಸಜ್ಞಾನ, ಅರಿವು, ಬಯಕೆಗಳ ಸಂಚಾರವಾಯಿತು. ಇದೇ ಸಂದರ್ಭದಲ್ಲಿ
ಬಳ್ಳಾರಿ ಜಿಲ್ಲಾ ಕಲೆಕ್ಟರ್ ಆರ್.ಸಿ.ಸಿ. ಕಾರ್ ಸಂಬಂಧಪಟ್ಟವರನ್ನು ಕರೆಸಿ, ನಿಮ್ಮ ಸಂಘದವತಿಯಿಂದ
ಪ್ರಾರಂಭೋತ್ಸ ವೆಂದು ಸಾರ್ವಜನಿಕ ಭಾಷಣ ಏಕೆ ಮಾಡಿಸಿದಿರಿ ಎಂದು ಕೇಳಿದರು. ಹೀಗೆ ಬಳ್ಳಾರಿ ಜಿಲ್ಲೆ
ಯಲ್ಲಿ ನಡೆದಂತಹ ಸ್ವಾತಂತ್ರ್ಯ ಹೋರಾಟಕ್ಕೆ ಕಲೆಕ್ಟರುಗಳು ನಿಷೇಧ ಮತ್ತು ಪ್ರತಿಬಂಧಿಕಾಜ್ಞೆ ಗಳನ್ನು
ಜಾರಿಗೊಳಿಸಿದ್ದು ಪ್ರಮುಖ ಸಂಗತಿ.
೧೯೦೫ರಲ್ಲಿ ಬಂಗಾಳವನ್ನು
ಇಬ್ಭಾಗಿಸಿದ ನಂತರ, ಭಾರತದಲ್ಲೆಲ್ಲಾ ಸ್ವದೇಶಿ ಚಳುವಳಿ ನಡೆಯಿತು. ಆಗ ಬಳ್ಳಾರಿ ಜಿಲ್ಲೆಯ ನಾಗರೀಕರಲ್ಲಿ
ಸ್ವದೇಶಾಭಿಮಾನ ವ್ಯಾಪಕವಾಗಿ ಬೆಳೆದು, ಸಣ್ಣಪುಟ್ಟ ತೊಂದರೆ, ಗಲಭೆಗಳನ್ನು ನಡೆಸಲು ಪ್ರಾರಂಭಿಸಿದರು.
ಈ ಸಂದರ್ಭದಲ್ಲಿ ಜಿಲ್ಲೆಯ ಕಲೆಕ್ಟರ್ ಬಿ.ಸಿ. ಸ್ಮಿತ್ ಅತೀ ಜಾಗೃತನಾಗಿ ಕಾರ್ಯ ನಿರ್ವಹಿಸಿದನು. ಅಂದು
ಮೊದಲನೇ ಮಹಾಯುದ್ಧ ವಿಶ್ವದಲ್ಲಿ ಪ್ರಾರಂಭವಾಗಿತ್ತು. ಇದರಲ್ಲಿ ಭಾರತೀಯ ಸೈನಿಕರನ್ನು ಕಳುಹಿಸುತ್ತಾರೆ.
ಮಹಾಯುದ್ಧದಲ್ಲಿ ಸೋತಂತಹ ಕೆಲವು ರಾಷ್ಟ್ರಗಳಲ್ಲಿ ಟರ್ಕಿಯು ಒಂದು. ೧೯೧೯ ನವೆಂಬರ್ ೧೯ರಂದು ಖಿಲಾಫತ್
ಚಳುವಳಿ ಆರಂಭವಾಯಿತು. ಇದರ ಪೂರ್ಣ ನೇತೃತ್ವ ಗಾಂಧೀಜಿಯವರದಾಗಿತ್ತು. ಈ ಚಳುವಳಿಯ ಮುಖ್ಯ ಉದ್ದೇಶ
ಟರ್ಕಿ ಸುಲ್ತಾನ ಸೋತಾಗ ಅವಮಾನ ತಡೆಯಲಾರದ ಮುಸ್ಲಿಂ ರಾಷ್ಟ್ರಗಳು ಮತ್ತು ಸಮುದಾಯಗಳು ಒಂದೆಡೆ ಸೇರಿದವು.
‘ಖಿಲಾಫತ್’ ಎಂಬ ಗೌರವ ಬಿರುದು, ಪದವಿಗಳು ಮಣ್ಣು ಪಾಲಾದವು. ಹಾಗಾಗಿ ಅದನ್ನು ಪ್ರತಿಭಟಿಸಿ ಹಿಂದೂ
ಮುಸ್ಲಿಂ ಐಕ್ಯಸಾಧನೆಗಾಗಿ ಬಳ್ಳಾರಿಗೆ, ಮಹಮದ್ ಅಲಿ ಮತ್ತು ಶೌಕತ್ ಅಲಿಯವರು ಬಂದಿದ್ದರು. ಟೌನ್ಹಾಲ್ನಲ್ಲಿ
ಭಾಷಣ ಮಾಡಿ ಚಳುವಳಿ ನಡೆಸಲು ಪ್ರೋತ್ಸಾಹ ಮಾರ್ಗದರ್ಶನ, ಉತ್ತೇಜನ ನೀಡಿದರು. ಅವರು ಹೇಳಿದ್ದು: ಮಹಾಯುದ್ಧದಲ್ಲಿ
ಸೋತಂತಹ ಟರ್ಕಿಸುಲ್ತಾನನ ಅಂತಸ್ತು, ಅಧಿಕಾರ ಮೊಟಕುಗೊಳಿಸ ಲಾಗಿದೆ. ಸುಲ್ತಾನನಿಗಿದ್ದ ‘ಖಿಲಾಫತ್’
ಬಿರುದು ಕಳೆದುಕೊಂಡಿದ್ದು ಎಲ್ಲಾ ಮುಸ್ಲಿಂ ಮತಕ್ಕೆ ಅವಮಾನ ಸಂಗತಿಯೆಂದು ಚಳುವಳಿಗೆ ಕರೆಕೊಟ್ಟರು.
ಆರಂಭದಲ್ಲಿಯೇ ಅಂದರೆ,
೧೯೨೦ ಆಗಸ್ಟ್ ೧ ರಂದು ಟಿ.ಬಿ. ಕೇಶವರಾಯರು ಬಳ್ಳಾರಿಯಲ್ಲಿ ಅಸಹಕಾರ ಚಳುವಳಿ ಕುರಿತಂತೆ ವಿದ್ಯಾರ್ಥಿಗಳಿಗೆ
ಕರೆನೀಡಿದರು. ಬಾಲ ಗಂಗಾಧರ ತಿಲಕರ ಮರಣದ ನಿಮಿತ್ತ ಅವರ ಧೈರ್ಯ, ಸ್ಥೈರ್ಯ, ದೇಶಪ್ರೇಮವನ್ನು ಅನುಕರಣೆ
ಮಾಡಲು ವಿದ್ಯಾರ್ಥಿಗಳಿಗೆ ವಿನಂತಿಸಿದರು. ೧೯೨೦ರ ದಶಕವನ್ನು ಅತೀ ಜಾಗೃತಿಯ ದಶಕವೆನ್ನಬಹುದು. ಅದೇ
ವರ್ಷದಲ್ಲಿ ೧೯೨೦ ನಾಗಪುರ ಕಾಂಗ್ರೆಸ್ ಸಮ್ಮೇಳನ ದಲ್ಲಿ ಕರ್ನಾಟಕ ಕಾಂಗ್ರೆಸ್ ಸಮಿತಿಯನ್ನು ಅಧಿಕೃತವಾಗಿ
ಪ್ರಾರಂಭಿಸಿದರು. ಬೆಳಗಾಂನ ಗಂಗಾಧರರಾವ್ ದೇಶಪಾಂಡೆಯವರು ಅದರ ಪ್ರಥಮ ಅಧ್ಯಕ್ಷರಾಗಿದ್ದರು.
ಆಗ ಬಳ್ಳಾರಿ ವಿಭಾಗದ
ಪ್ರದೇಶದ ಕಾಂಗ್ರೆಸ್ ಸಂಸ್ಥೆಯಲ್ಲಿ ಒಗ್ಗಟ್ಟಿರಲಿಲ್ಲ. ಭಾಷಾ ವಿಭಾಗಗಳಿದ್ದವು. ಬಳ್ಳಾರಿ ನಗರ ಆಗ
ದ್ವಿಭಾಷಾ ಸ್ಥಳವೆಂದು ಪ್ರಸಿದ್ದಿಯಾಗಿತ್ತು. ಇಲ್ಲಿ ಆದವಾನಿ ಅಚ್ಚಗನ್ನಡದ ಪ್ರದೇಶವಾಗಿತ್ತು. ಇದು
ಹೋರಾಟದ ನೇತೃತ್ವ ವಹಿಸಿದ್ದಿತು. ಬಳ್ಳಾರಿ, ಹೊಸಪೇಟೆ ತಾಲ್ಲೂಕುಗಳು ಸೇರಿದಂತೆ ಅನೇಕ ಕಡೆಗಳಲ್ಲಿ
ಕನ್ನಡ ಸಂಘಗಳಿದ್ದವು. ೧೯೨೧ರಲ್ಲಿ ಮಹಾತ್ಮಗಾಂಧೀಜಿ ಬಳ್ಳಾರಿಗೆ ಸಂದರ್ಶಿಸಿದರು. ಆಗ ಜನರು ಕುತೂಹಲದಿಂದ
ಅವರನ್ನು ಕಾಣಲು ಮುಂದಾಗಿದ್ದರು. ಬಳ್ಳಾರಿಯ ಮುಖ್ಯ ಬೀದಿಗಳನ್ನು ಅಲಂಕೃತಗೊಳಿಸ ಲಾಯಿತು. ಗಾಂಧೀಜಿ
ಬಳ್ಳಾರಿಗೆ ಬಂದಾಗ ಎರಡು ಪಂಗಡದವರು ಕನ್ನಡ ಮತ್ತು ತೆಲುಗು ಸ್ವಾಗತಿಸಲು ಮುಂದಾದದ್ದು ಸ್ವಲ್ಪ ಗೊಂದಲಕ್ಕೆ
ಕಾರಣವಾಯಿತು. ಅತಿರೇಕಕ್ಕೆ ಹೋದಾಗ ಗಾಂಧೀಜಿ ಆಲೋಚಿಸಿ “ನಾನು ಈ ದಿನ ರಾತ್ರಿ ರೈಲು ಪ್ಲಾಟ್ ಫಾರಂನಲ್ಲಿಯೇ
ತಂಗುತ್ತೇನೆ” ಎಂದು ತೀರ್ಮಾನಿಸಿ ಬಿಟ್ಟರು.[3] ಗಾಂಧೀಜಿ ತಾನು ಧರಿಸಿದ ಧೋತಿಯನ್ನು ಪಂಚೆ ಹಾಸಿಗೆಯಾಗಿ ಮಾಡಿಕೊಂಡು ಒಂದು ಮಗು ನಿದ್ರಿಸುವಂತೆ
ರಾತ್ರಿ ನಿದ್ರಿಸಿ ಕಾಲ ಕಳೆದರು. ಆನಂತರ ಬೆಳಗಿನ ಜಾವ ಬಳ್ಳಾರಿ ಬಿಟ್ಟು ಗದಗ, ಅಲ್ಲಿಂದ ಬೊಂಬಾಯಿ
ಮೂಲಕ ಪ್ರಯಾಣಿಸಿ ತಮ್ಮ ಆಶ್ರಮ ತಲುಪಿ(ಶಬರಮತಿ)ದರು. ಕೆಲವು ದಿನಗಳಾದ ಮೇಲೆ ಟೇಕೂರು ಸುಬ್ರಹ್ಮಣ್ಯ
ಗಾಂಧೀಜಿಯವರನ್ನು ಆಶ್ರಮದಲ್ಲಿ ಕಂಡಾಗ ಅವರು ಕುತೂಹಲದಿಂದ ಬಳ್ಳಾರಿಯ ಭಾಷಾ ಗುಂಪುಗಳ ವಿಚಾರ ಕೇಳಿದರು.
ಅಸಹಕಾರ ಚಳುವಳಿ ಬಳ್ಳಾರಿಯಲ್ಲಿ
ಪ್ರಾರಂಭವಾದುದು ಮೊದಲು ಬುದ್ದಿಜೀವಿಗಳಿಂದ. ಸಾಹಿತಿ, ಕಲಾವಿದರು, ವಕೀಲರು, ಅಧಿಕಾರಿಗಳು, ಸರ್ಕಾರಿ
ನೌಕರರು, ಇತರರು, ರಾಜೀನಾಮೆ ಕೊಟ್ಟು ಬೇರೆ ಬೇರೆ ಬಗೆಯಲ್ಲಿ ಈ ಚಳುವಳಿಯಲ್ಲಿ ಭಾಗವಹಿಸುತ್ತಾರೆ.
ಕಾಂಗ್ರೆಸ್ನಲ್ಲಿದ್ದ ಮುಖ್ಯ ನಾಯಕರು ಸಾಮಾನ್ಯವಾಗಿ ಬ್ರಾಹ್ಮಣರಾಗಿದ್ದರು. ಹಾಗಾಗಿ ಇಲ್ಲಿ ಬ್ರಾಹ್ಮಣೇತರರಿಗೆ
ಪ್ರತಿಭೆ ಇದ್ದರೂ ಅವಕಾಶಗಳಿಂದ ವಂಚಿತರಾಗಬೇಕಾಯಿತೆಂಬ ಕೊರಗಿದೆ. ಕಾಂಗ್ರೆಸ್ನಲ್ಲಿದ್ದ ಮುಖಂಡರೆಂದರೆ,
ಬೆಳಗಾವಿಯಲ್ಲಿ ಕೃಷ್ಣರಾವ್, ಕೆರೆಗುಬ್ಬಿ ನಾರಾಯಣರಾವ್, ಜೋಶಿ, ಗಂಗಾಧರರಾವ್ ದೇಶಪಾಂಡೆ, ವಿಜಾಪುರದಲ್ಲಿ
ಶ್ರೀನಿವಾಸ್ ಕೌಜಲಗಿ, ಜಯರಾಮ್ ನರಗುಂದ, ಹನುಮಂತರಾವ್ ಕೌಜಲಗಿ, ಮಂಗಳೂರಿನಲ್ಲಿ ಕಾರ್ನಾಡ್ ಸದಾಶಿವರಾವ್,
ಕೆ.ಆರ್. ಕಾರಂತ್ ಧಾರವಾಡ. ಹೀಗೆ ಬಳ್ಳಾರಿಯಲ್ಲಿಯೂ ಸಹ ಹೆಚ್ಚು ಬ್ರಾಹ್ಮಣರು ಮುಂದಾಳುಗಳಾಗಿದ್ದರು.
ಶ್ರಮಿಕ, ಮಹಿಳೆ, ಮುಸ್ಲಿಂ, ಕೆಳವರ್ಗದವರು ಭಾಗವಹಿಸಿದ್ದ ಉದಾಹರಣೆಗಳಿದ್ದು, ಬರಹಗಾರರು ಅಧ್ಯಯನದ
ಸಂದರ್ಭದಲ್ಲಿ ಅವರನ್ನು ಅಲಕ್ಷಿಸಿದ್ದಾರೆ. ಈ ಅಧ್ಯಾಯನದ ಕೊನೆಯಲ್ಲಿ ಈ ಸಂಗತಿಗಳನ್ನು ಚರ್ಚಿಸಲಾಗಿದೆ.
೧೯೩೦ ಉಪ್ಪಿನ ಸತ್ಯಾಗ್ರಹ
ಈ ಭಾಗದಲ್ಲಿ ಉಪ್ಪಿನ
ಸತ್ಯಾಗ್ರಹ ಮಾಡಿರುವುದು ಕಂಡುಬಂದಿದೆ. ಇದಕ್ಕೆ ಕಾರಣ ೧೮೩೬ರಲ್ಲಿ ಬ್ರಿಟಿಷ್ ಸರ್ಕಾರ ಉಪ್ಪಿನ ಆಯೋಗವನ್ನು
ನೇಮಿಸಿತ್ತು. ಇಂಗ್ಲೆಂಡಿನ ಉಪ್ಪು ಭಾರತದಲ್ಲಿ ಮಾರಾಟವಾಗಲು ಸಾಧ್ಯವಾಗಬೇಕಾದರೆ, ಭಾರತೀಯ ಉಪ್ಪಿನ
ಮೇಲೆ ತೆರಿಗೆ ವಿಧಿಸುವುದರ ಮೂಲಕ ಬೆಲೆ ಹೆಚ್ಚಿಸಬೇಕು. ಭಾರತಕ್ಕೆ ಇಂಗ್ಲೆಂಡ್ ರಫ್ತು ಮಾಡುತ್ತಿದ್ದ
ಸರಕುಗಳಿಗೆ ಇಲ್ಲಿ ಬೇಕಾದಷ್ಟು ಹಡಗುಗಳಿದ್ದವು. ಭಾರತದಿಂದ ಇಂಗ್ಲೆಂಡಿಗೆ ತೆಗೆದುಕೊಂಡು ಹೋಗುತ್ತಿದ್ದ
ಕಚ್ಚಾಸರಕುಗಳಿಗೆ ಹಡಗುಗಳು ಕಡಿಮೆ ಇದ್ದವು. ಇನ್ನೊಂದು ಅನುಕೂಲ ವೆಂದರೆ, ಖಾಲಿ ಹಡಗುಗಳು ಇಂಗ್ಲೆಂಡಿನಿಂದ
ಭಾರತಕ್ಕೆ ಬರುವುದು ಕಷ್ಟವಾಗುತ್ತಿತ್ತು. ಖಾಲಿ ಹಡಗು ಸಂಚಾರ ಪ್ರಯಾಣದಲ್ಲಿ ಕಷ್ಟವಾಗುತ್ತಿತ್ತು.
ಈ ಕಾರಣದಿಂದ ಬ್ರಿಟನ್ನಿನ ಚೆಷ್ಟರ್ನಲ್ಲಿ ಹೇರಳವಾಗಿ ಉಪ್ಪನ್ನು ಹಡಗುಗಳಿಗೆ ತುಂಬಿ ಕಳುಹಿಸುತ್ತಿದ್ದರು.
೧೯೩೦ ಮಾರ್ಚ್ ೧೨ ರಂದು
ಉಪ್ಪಿನ ಮಳಿಗೆಗಳ ಮೇಲೆ ಲೂಟಿ ಮಾಡಿ ಸಬರಮತಿ ಯಿಂದ ೨೦೦ ಮೈಲಿ ದೂರದ ದಂಡಿಯಲ್ಲಿ ಸತ್ಯಾಗ್ರಹ ನಡೆಸಿದರು.
ಆಗ ಏಪ್ರಿಲ್ನಲ್ಲಿ ದಂಡಿಸತ್ಯಾಗ್ರಹ ನಡೆಸಿದಾಗ ಬಳ್ಳಾರಿ, ಹೊಸಪೇಟೆ, ಕೊಟ್ಟೂರುಗಳಲ್ಲಿ ಮೆರವಣಿಗೆಗಳು
ಪ್ರಾರಂಭವಾದವು. ಆಗ ವದ್ದಹಟ್ಟಿ, ಕೋಳೂರಿನಲ್ಲಿ ಸಾಂಕೇತಿಕ ಉಪ್ಪಿನ ಸತ್ಯಾಗ್ರಹ ನಡೆಸಿದರು.
ಆನಂತರ ಮಧ್ಯಪಾನ ನಿಷೇಧ ಸತ್ಯಾಗ್ರಹ ಪ್ರಾರಂಭವಾಯಿತು. ೨೩.೦೨. ೧೯೨೦ರಲ್ಲಿ ಕರ್ನಾಟಕ ಪ್ರಾಂತೀಯ ಕಾಂಗ್ರೆಸ್
ಸಭೆ ಸ್ಥಾಪನೆಯಾದ ನಂತರ ರೂಪುರೇಷೆಗಳು ಬೇರೆಯಾದವು. ೧೬.೦೩.೧೯೩೦ರಲ್ಲಿ ಶಾಸನ ಭಂಗಸಮಿತಿ ಸ್ಥಾಪನೆಯಿಂದ
ಜಿಲ್ಲೆಯಾದ್ಯಂತ ಮಧ್ಯಪಾನ ನಿಷೇಧದ ಅಂಗವಾಗಿ ಈಚಲು ಮರಗಳನ್ನು ಕಡಿಯುವ ಕಾರ್ಯನೆರವೇರಿತು. ೧೯೩೦ರಲ್ಲಿ
ಬಳ್ಳಾರಿಯ ಪಟೇಲ್ ನಗರದಲ್ಲಿ ಸ್ವಯಂ ಸೇವಕರಿಗೆ, ಟಿ. ಸುಬ್ರಹ್ಮಣ್ಯಂ ಕಾರ್ಯದರ್ಶಿಗಳಾಗಿ ಅಮಲು ವಸ್ತುಗಳ
ಚಲಾವಣೆಯನ್ನು ನಿಷೇಧಿಸಿದರು. ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಈ ನಿಷೇಧ ಜಾರಿಯಾಯಿತು. ಬಳ್ಳಾರಿಯಲ್ಲಿ
ಸತ್ಯಾಗ್ರಹ ಶಿಬಿರ ಸ್ಥಾಪನೆಯ ನಂತರ, ಜಿಲ್ಲಾ ಧುರೀಣರಿಂದ ಸುಬ್ರಹ್ಮಣ್ಯಂರನ್ನು ಹರಪನಹಳ್ಳಿಗೆ ಆಹ್ವಾನಿಸಿ,
ಕಂಚಿಕೆರೆಯಲ್ಲಿ ಈಚಲ ಗಿಡಗಳನ್ನು ಕಡಿಯಲು ನಿಶ್ಚಯಿಸಲಾಯಿತು. ಆಗ ಬಳ್ಳಾರಿ, ಕೊಟ್ಟೂರು, ಹರಪನಹಳ್ಳಿಗಳಲ್ಲಿ,
ಸತ್ಯಾಗ್ರಹದ ಮುಖ್ಯ ಕೇಂದ್ರ ಸ್ಥಳಗಳಾಗಿದ್ದವು.[4] ೧೯೩೦-೩೨ರಲ್ಲಿ ಮಧ್ಯಪಾನ ನಿಷೇಧ ಚಳುವಳಿಯಲ್ಲಿ “ಕರ್ನಾಟಕ ಕೇಸರಿ” ಎನ್ನುವ ವಾರಪತ್ರಿಕೆಯನ್ನು
ವಿ.ಎಂ. ಗಿರಿ, ಸುಬ್ರಹ್ಮಣ್ಯಂ ಪ್ರಕಟಿಸಿದರು. ೧೯೩೦ರ ನಂತರ ಕಾಂಗ್ರೆಸ್ಗೆ ವೀರಶೈವರನ್ನು ಸೇರಿಸಿಕೊಂಡರು.
ಅವರುಗಳೆಂದರೆ, ಗುದ್ಲೆಪ್ಪ, ಸರದಾರ, ವೀರನಗೌಡ, ತಲ್ಲೂರು, ಎಂ.ಪಿ. ಪಾಟೀಲ, ಮಹದೇವಪ್ಪ ಮೈಲಾರ ಮತ್ತು
ಬಳ್ಳಾರಿ ಸಿದ್ಧಮ್ಮ. ಮದ್ಯನಿಷೇಧದ ವಿರುದ್ಧ ಇವರು ಹೋರಾಟ ನಡೆಸಿದರು.
ಹಡಗಲಿ, ಮಾಗಳ, ಕೊಟ್ಟೂರು,
ಉಜ್ಜನಿ, ತೂಲಹಳ್ಳಿಗಳಲ್ಲಿ ಭರದಿಂದ ಸತ್ಯಾಗ್ರಹ ಚಳುವಳಿ ನಡೆಯಿತು. ಕೊಟ್ಟೂರಿನ ಸಣ್ಣರುದ್ರಪ್ಪನ
ನೇತೃತ್ವದಲ್ಲಿ ನಡೆದ ಚಳುವಳಿಯಲ್ಲಿ ಒಂದೇ ದಿನ ಈಚಲು ಗಿಡ ಕಡಿದ ಆರೋಪಕ್ಕಾಗಿ ೨೫ ಜನರು ಬಂಧಿತರಾದರು.[5] ಟಿ.ಬಿ. ಕೇಶವರಾಯರು ಹರಪನಹಳ್ಳಿ ತಾಲ್ಲೂಕಿನ ಪ್ರತಿಹಳ್ಳಿಗೂ ಪ್ರಚಾರ ಮಾಡಿ ೧೯೩೦-೩೧ರ
ಸಾಲಿನಲ್ಲಿ ಮದ್ಯದಂಗಡಿಗಳ ಮಾರಾಟದಲ್ಲಿ ಕಳೆದ ವರ್ಷಕ್ಕಿಂತ ಶೇ. ೫೦ರಷ್ಟು ಹಣ ಲಭ್ಯವಾಯಿತೆಂದು ಮತ್ತು
ಬಳ್ಳಾರಿಯಲ್ಲಿ ನಡೆದ ಪಿಕೆಟಿಂಗ್ ಚಳುವಳಿ ಉಗ್ರರೂಪ ಕೆರಳಿಸಿದ್ದಕ್ಕೆ ಅಭಿನಂದನೆ ಸಲ್ಲಿಸಿದರು. ಹೆಂಡ,
ಸರಾಯಿ, ಅಂಗಡಿಗಳಿಗೆ ಬೆಂಕಿ ಇಟ್ಟಿದ್ದಕ್ಕಾಗಿ ಹುಲಿಕೇರಿ ಬಸಪ್ಪನನ್ನು ಸೆರೆಮನೆಗೆ ಹಾಕಿದರು. ಅಲ್ಲಿ
ಕಲೆಕ್ಟರನ ಆದೇಶದಂತೆ ಅಧಿಕಾರಿ ಬೂಟುಕಾಲಿನಿಂದ ಈತನ ಕಾಲನ್ನು ತುಳಿದಾಗ ಗಾಯವಾಗಿ ಕಾಲಲ್ಲಿ ರಕ್ತ
ಬಂದಿತ್ತು. ಆಗ ಸೆರೆಮನೆಗೆ ಹೋಗುವುದೆಂದರೆ ಇಂಥವರಿಗೆ ಎಲ್ಲಿಲ್ಲದ ಸಂತೋಷ. ಸ್ನೇಹಿತರಿಗೆ ಔತಣಕೂಟ
ಏರ್ಪಡಿಸಿ ಅನಂತರ ಸೆರೆಮನೆಗೆ ಹೋಗುತ್ತಿದ್ದರಂತೆ. ಈ ಸಂದರ್ಭದಲ್ಲಿ ಅಪರಾಧಗಳು ಸರಳವಾಗಿದ್ದವು. ಮೈಲಿಕಲ್ಲು
ಹೊಡೆಯುವುದು, ರಸ್ತೆ ಮತ್ತು ಸೇತುವೆಗಳನ್ನು ಜಖಂ ಮಾಡಿದ್ದು ಬ್ರಿಟಿಷರ ವಿರುದ್ಧ ಸೇಡಿನ ಕೃತ್ಯಗಳಾಗಿದ್ದವು.
ಇವು ದೇಶಪ್ರೇಮದಿಂದ ಕೂಡಿದ ಘಟನೆಗಳಾಗಿವೆ.
ಬಳ್ಳಾರಿಯಲ್ಲಿ ಸತ್ಯಾಗ್ರಹಕ್ಕೆ
ಪೂರ್ವಸಿದ್ಧತೆ ನಡೆಸಿ ಮಧ್ಯಪಾನ ಅಂಗಡಿಗಳ ಬಹಿಷ್ಕಾರಕ್ಕಾಗಿ ಪಿಕೆಟಿಂಗ್ ಮಾಡಿದರು. ೧೯೩೦ ಆಗಸ್ಟ್
೯ನೇ ದಿವಸ ವಿ.ಎಂ. ಗಿರಿ ಮತ್ತು ಸಿದ್ಧಪ್ಪ ಇವರನ್ನು ಹೆಂಡದಿಂದ ಸ್ನಾನ ಮಾಡಿಸಿದ ಘಟನೆಯನ್ನು ಸ್ಮರಿಸಬಹುದು.[6] ಇದಾದನಂತರ ಗಾಂಧೀಜಿಯ ಆದರ್ಶಗಳನ್ವಯ ಸತ್ಯಾಗ್ರಹಕ್ಕೆ ಹೊಸಚಾಲನೆ ಸಿಕ್ಕಿತು. ‘ಕುಡುಕರ
ಕಾಲಿಗೆ ಬಿದ್ದು ಕುಡಿಯಬೇಡಿರಿ’ ಎಂಬ ಅಹಿಂಸಾತ್ಮಕ ಮತ್ತು ಸೂಚಿತ ಪದ್ಧತಿಯನ್ನು ಅನುಸರಿಸ ಲಾಯಿತು.
೧೯೩೨ರ ಆಂದೋಲನದಲ್ಲಿ ಆಂಗ್ಲರ ಒಡೆದು ಆಳುವ ನೀತಿಯನ್ನು ವಿರೋಧಿಸಿ, ಅನೇಕ ಹೋರಾಟಗಾರರು ಉಪವಾಸ ಸತ್ಯಾಗ್ರಹ
ಮಾಡಿದರು. ಆಗ ಭಾರತದಲ್ಲಿ ವೈಸರಾಯ್ ವೆಲ್ಲಿಂಗಟನ್ ಆಗಿದ್ದನು. ಬಳ್ಳಾರಿಯ ಕಲೆಕ್ಟರ್ ಎಫ್. ಡಬ್ಲ್ಯೂ,
ಸ್ಟೇವರ್ಟ ಇಲ್ಲಿನ ಸ್ವಾತಂತ್ರ್ಯ ಹೋರಾಟಗಾರರ ಮೇಲೆ ನಾಯಿಗಳಿಗಿಂತ ಕಡಿಮೆಯಾಗಿ ದುರ್ನೀತಿ ಗಳನ್ನು
ಅನುಸರಿಸಿದರು. ಆಂಗ್ಲರ ಆಡಳಿತವನ್ನು ಖಂಡಿಸಿ ಅನಧಿಕೃತ ಸಾಹಿತ್ಯ ಹಂಚಿ ಲಕ್ಷ್ಮಿದೇವಿ, ಟಿ.ಬಿ. ಜಯಲಕ್ಷ್ಮಿದೇವಿ
ಬಂಧಿಸಲ್ಪಟ್ಟರು. ಜನರಿಗೆ ಶಿಸ್ತು, ಶಾಂತಿ, ಸಂಸ್ಕೃತಿ ಹೇಳುತ್ತಾ ಆಂಧ್ರ ಕರ್ನಾಟಕ ಭಾಗದ ಜನರೆಲ್ಲರೂ
ಮದ್ಯವನ್ನು ವಿರೋಧಿಸಿದರು. ೧೯೩೨ರಂದು ಆಗಸ್ಟ್ ೧೯ರಂದು ೧೪೪ ಕಾಲಂ ಇದ್ದರೂ ಹೋರಾಟಗಾರರು ಗಲಾಟೆ ಮಾಡಿ,
ಸರ್ಕಾರದ ಆಜ್ಞೆಗಳನ್ನು ಗಾಳಿಗೆ ತೂರಿದರು. ಅಂದು ರಾಷ್ಟ್ರಧ್ವಜವನ್ನು ಹಾರಿಸಿದಾಗ ಕಲೆಕ್ಟರ್ ಬಂಧಿಸಿದರು.
ಲಾಹೋರ್ ಮೊಕದ್ದಮೆಗೆ
ಸಂಬಂಧಿಸಿದಂತೆ ಡಾ. ಗಯಾಪ್ರಸಾದ, ಶ್ರೀ ಮಹಾವೀರ ಸಿಂಹನನ್ನು ಬಳ್ಳಾರಿ ಸೆರೆಮನೆಗೆ ತಂದರು. ಅಲ್ಲಿಂದ
ಬಂದ ಖೈದಿಗಳನ್ನು ಕ್ಲೋಸ್ಪ್ರಿಸನ್ಗೆ ಹಾಕುತ್ತಿದ್ದರು. ‘ಇಂಕ್ವಿಲಾಬ್ ಜಿಂದಾಬಾದ್ ಲಾಂಗ್ಲಿವ್
ರೆವಲ್ಯುಷನ್’ ಎಂದು ಘೋಷಣೆ ಕೂಗುತ್ತಾ, ಗಾಂಧೀಜಿಕೀ ಜೈ ಎನ್ನುತ್ತಿದ್ದರು. ೧೯.೯.೧೯೩೨ರಂದು ಸೆರೆಮನೆ
ಯಲ್ಲಿ ಡೆಪ್ಯುಟಿ ಜೈಲರ್, ಗುಮಾಸ್ತರೂ, ರಿಸರ್ವ್ ಸಹಾಯದಿಂದ ಬಾಲಕರು, ವೃದ್ಧರು, ರೋಗಿಗಳು ಎಂಬ ವಿವೇಚನೆಯಿಲ್ಲದೆ
ಲಾಠೀ ಪ್ರಹಾರ ಮಾಡಿದರು. ಆಗ ಶಾಸನಭಂಗ ಚಳುವಳಿ ಮಾಡಿದ್ದಕ್ಕಾಗಿ ಹೊಸಪೇಟೆಯಲ್ಲಿ ಜಯಲಕ್ಷ್ಮೀಬಾಯಿಯವರನ್ನು
ಬಂಧಿಸಿದ್ದರು. ೧೯೩೩ರ ರಾಜಕೀಯ ಕಾರ್ಯಕರ್ತರ ಸಮ್ಮೇಳನ ಕೊಟ್ಟೂರಿನಲ್ಲಿ ಸಮಾವೇಶಗೊಳಿಸಿದ್ದರು.[7] ೧೯೩೪ರಲ್ಲಿ ಗಾಂಧೀಜಿ ದಾವಣಗೆರೆಯಲ್ಲಿ ಹರಿಜನ ಪ್ರವಾಸ ಕಾರ್ಯಕ್ರಮ ಮುಗಿಸಿಕೊಂಡು
(ಜಿಲ್ಲೆಯ ಸಾಹುಕಾರ ಬೆಣಕಲ್ ಈಶ್ವರಪ್ಪ ಹೊಸಕಾರನ್ನು ತಂದಿದ್ದರಲ್ಲದೆ ಗಾಂಧೀಜಿಯ ಆಗಮನಕ್ಕಾಗಿ ದಾವಣಗೆರೆಗೆ
ಕಳುಹಿಸಿದರು), ಅವರನ್ನು ನೀಲಗುಂದ ಮಾರ್ಗ ವಾಗಿ ಹರಪನಹಳ್ಳಿಗೆ ಕರೆತಂದರು. ಅಲ್ಲಿ ಹರಿಜನ ನಿಧಿಗೆ
ಹಣ ಸಂಗ್ರಹಿಸಿ ಮುಂದುವರೆದು ಮಧ್ಯದಲ್ಲಿ ಚಿಗಟೇರಿ ಜನರು ಕರೆದಾಗ ಪೂರ್ವ ನಿಯೋಜಿತ ಕಾರ್ಯಕ್ರಮ ಇರುವುದರಿಂದ
ಗಾಂಧೀಜಿ ಹೋಗಲಿಲ್ಲ. ೧೯೩೪ರ ಮಾರ್ಚ್ ಮಧ್ಯಾಹ್ನ ೩.೩೦ರಲ್ಲಿ ಕೊಟ್ಟೂರಿನ ಚರಿತ್ರೆಯಲ್ಲಿ ಮರೆಯಲಾಗದ
ದಿನ. ಗಾಂಧೀಜಿಯವರ ಸಂದರ್ಶನ ಇಲ್ಲಿನ ಸೇವಾಶ್ರಮಕ್ಕೆ ಕೋಗಳಿಯ ತೋಟದಗೌಡರು ಕೊಟ್ಟೂರಿನಲ್ಲಿದ್ದ ೮
ಎಕರೆ ತೋಟವನ್ನು ದಾನ ಮಾಡಿದನು.
ನಂತರ ಗಾಂಧೀಜಿ ಅಲ್ಲಿ
ಹರಿಜನ ಎಂದರೆ ಹರಜನ. ನನಗೆ ಹರಿಜನ ಶಬ್ದ ಅಷ್ಟಾಗಿ ಸರಿಬರುವುದಿಲ್ಲ ಎಂದು ತಿಳಿಸಲಾಯಿತು. ಕೊಟ್ಟೂರಿನಲ್ಲಿ
ಜಾತ್ರೆ ಮತ್ತು ತೇರು ಆಗುತ್ತಿದ್ದಾಗ ವಿಶಾಲವಾದ ಬಜಾರಿನಲ್ಲಿ ನಿಂತಿದ್ದ ಮಹಿಳೆ ಗಾಂಧೀಜಿಗೆ ತನ್ನೆರಡು
ಬಂಗಾರದ ಬಳೆಗಳನ್ನು ಹರಿಜನ ನಿಧಿಗೆ ದಾನ ಮಾಡಿದಳು. ನಂತರ ಕೂಡ್ಲಿಗಿಗೆ ಬಂದರು. ಹಿಂದೂ ಮುಸ್ಲಿಂ
ಐಕ್ಯತೆಯಿಲ್ಲದ ಸ್ವರಾಜ್ಯ ಇಲ್ಲ ಎಂದು ಒಪ್ಪಿಕೊಳ್ಳುವುದಾದರೆ, ಹಿಂದೂ ಧರ್ಮಕ್ಕೆ ಖಂಡಿತ ಕಳಂಕವಾದ
ಅಸ್ಪೃಶ್ಯತೆಯನ್ನು ತೊಡೆದು ಹಾಕುವವರೆಗೂ ಸ್ವರಾಜ್ಯವಿಲ್ಲ ನನ್ನ ಸಂಪೂರ್ಣ ಒಪ್ಪಿಗೆಯುಂಟು ಎಂದರು.[8] ಅಲ್ಲಿ ನಿಧಿ ಸಂಗ್ರಹಿಸಿ ಗಾಂಧೀಜಿ ಸೊಂಡೂರಿಗೆ ಪ್ರಯಾಣಿಸಿ ದರು. ಅಲ್ಲಿ ಗಾಂಧೀಜಿಗೆ
ರಾಜಮರ್ಯಾದೆ, ಸನ್ಮಾನ ದೊರೆಯಿತು. ಕುಮಾರಸ್ವಾಮಿ ದೇವಾಲಯವನ್ನು ಹರಿಜನರಿಗೆ ತೆರೆಯಲಾಯಿತು. ರಾಜ
ಸುತ್ತೋಲೆ ಹೊರಡಿಸಿ ಸಂಸ್ಥಾನದ ಎಲ್ಲಾ ದೇವಸ್ಥಾನಗಳಿಗೆ ಎಲ್ಲಾ ಜನರಿಗೂ ಮುಕ್ತ ಪ್ರವೇಶ ತಿಳಿಸಿದರು.
ಗಾಂಧಿ ಅಸ್ಪೃಶ್ಯತಾ ನಿವಾರಣೆಯ ಕೆಲಸದಿಂದ ನನಗೆ ಸಂತೋಷ ಆಗಿದೆ. ಅಸ್ಪೃಶ್ಯತಾ ನಿವಾರಣೆ ಮಾಡದಿದ್ದರೆ
ಜಗತ್ತಿನಲ್ಲಿರುವುದು ನಮಗೆ ಕಷ್ಟವಾಗುತ್ತದೆ.[9] ತರುವಾಯ ಅಲ್ಲಿಯೂ ಡಾ. ಷರಾಫ್ರ ಗೃಹದಲ್ಲಿ ವಿಶ್ರಾಂತಿ ಪಡೆದರು. ಸಂಸ್ಥಾನದ ಚಾರಿತ್ರಿಕ
ಮಹತ್ವವನ್ನು ಅರಿತು Sandur is an Oasis in the
region ಎಂದು ಹರ್ಷದಿಂದ ಕೊಂಡಾಡಿದ್ದರು. ಸ್ವಯಂ ಸೇವಕರು
ಗಾಂಧಿಯನ್ನು ಬಳ್ಳಾರಿಗೆ ಕರೆತಂದು ಸುಮಾರು ೫,೩೦೦ ರೂ. ಹರಿಜನ ನಿಧಿಗೆ ಕೊಟ್ಟರು. ‘ಇಲ್ಲಿಂದ ಹೊಸಪೇಟೆ
ಮೂಲಕ ಗದಗ ತಲುಪಿದರು. ಗಾಂಧೀಜಿಗೆ ಹೊಸಕಾರನ್ನು ಬಳಸಿ ಸಹಕರಿಸಿದ ಬನ್ನಿಕಲ್ ವೀರಾಪುರದ ಈಶ್ವರಪ್ಪನವರಿಗೆ
ಗಾಂಧೀ ಸಹಿ ಮಾಡಿದ ಪತ್ರ ಕಳುಹಿಸಿದರು’.[10]
ಹಂಪಿಯಲ್ಲಿ ವಿಜಯನಗರ
ಸಾಮ್ರಾಜ್ಯದ ಷಟ್ ಶತಮಾನೋತ್ಸವವನ್ನು ನಡೆಸಿದರು. ಉತ್ಸವದಲ್ಲಿ, ಶಾಲಾ ತರುಣರು, ಸ್ವಯಂ ಸೇವಕರು ಪ್ರಚಾರ
ಕೈಗೊಂಡರು. ಸ್ವಾತಂತ್ರ್ಯ ಹೋರಾಟದ ಬಗ್ಗೆ ಚಿಂತಿಸಿ ಹಿಂದಿನ ಚಾರಿತ್ರಿಕ ಘಟನೆಗಳನ್ನು ಮೆಲುಕು ಹಾಕಿದರು.
೧೯೩೭ರಲ್ಲಿ ಬಳ್ಳಾರಿ ಜಿಲ್ಲೆ ಬಣಜಾರ ಸಭೆಯನ್ನು ಹರಪನಹಳ್ಳಿಯಲ್ಲಿ ಜರುಗಿಸಿ, ಅಧ್ಯಕ್ಷತೆ ಹೊಸಪೇಟೆ
ಸಬ್ ಕಲೆಕ್ಟರ್ ಉಣಿಕಾನ್ ವಹಿಸಿದ್ದರು.
೧೯೩೭ರಲ್ಲಿ ಪ್ರಾಂತ್ಯಗಳಲ್ಲಿ
ಶಾಸನಸಭೆಗೆ ಸೀತಾರಾಮರೆಡ್ಡಿಯನ್ನು ಆಯ್ಕೆ ಮಾಡಿದರು. ಆ ಸಂದರ್ಭದಲ್ಲಿ ಎಸ್. ನಿಜಲಿಂಗಪ್ಪ ಬಳ್ಳಾರಿಯಲ್ಲಿ
ಆಜಾದ್ ಕ್ಲಬ್ನ್ನು ಉದ್ಘಾಟಿಸುತ್ತಾ ಗಾಂಧೀ ಮತ್ತು ಕಾಂಗ್ರೆಸ್ನ ರೂಪುರೇಷೆಗಳನ್ನು ಜನರಿಗೆ ವಿವರಿಸಿದರು.
ಅನಂತರ ಕನ್ನಡ ಗೆಳೆಯರ ಗುಂಪಿನ ಬೇಡಿಕೆಗಳಲ್ಲಿ ಮುಖ್ಯವಾದದು. ೧೯೩೯ ಜುಲೈ ೧೫ ರಂದು ಸಾಂಬ ಮೂರ್ತಿ
ಮೈದಾನದಲ್ಲಿ ‘ಫಾರ್ವರ್ಡ ಬ್ಲಾಕ್’ನ್ನು ರಚಿಸಲು ಸುಭಾಷ್ ಚಂದ್ರಬೋಸ್ರನ್ನು ಆಹ್ವಾನಿಸಿದರು ಅವರು
ಬರಲಿಲ್ಲ.[11] ವೈಯಕ್ತಿಕ ಸತ್ಯಾಗ್ರಹದಲ್ಲಿ ಸಾವಿರಾರು ಜನ ಸೆರೆಮನೆ ವಾಸ (೧೯೪೦-೪೧ರಲ್ಲಿ) ಕಂಡರು.
ಪ್ರಚಾರ ಕಾರ್ಯ, ಸತ್ಯಾಗ್ರಹದಲ್ಲಿ ತೊಡಗಿದ್ದ ಬಳ್ಳಾರಿಯ ವಕೀಲ ನಾಗಭೂಷಣಂ, ಆಲೂರಿನ ವೆಂಕಟೇಶರಾವ್
ಮತ್ತು ಕೊಟ್ಟೂರಿನ ದೇವೇಂದ್ರಪ್ಪನವರನ್ನು ಟೌನ್, ನ್ಯೂಸನ್ಸ ಆ್ಯಕ್ಟ್ ಪ್ರಕಾರ ಧಾರವಾಡ ಮತ್ತು ಗದಗಗಳಲ್ಲಿ
ಬಂಧಿಸಿದರು.
೧೯೪೨ರ ಭಾರತ ಬಿಟ್ಟು ತೊಲಗಿ ಚಳುವಳಿ
ಬಳ್ಳಾರಿ ಜಿಲ್ಲೆಯಲ್ಲಿ
ನಡೆದಂತಹ ಸ್ವಾತಂತ್ರ್ಯ ಹೋರಾಟದ ಘಟನೆಗಳಲ್ಲಿ ಇದು ನಿರ್ಣಾಯಕವಾದುದು. ೧೯೦೫ರ ಬಂಗಾಳದ ವಿಭಜನೆ, ೧೯೦೯
ಮಾರ್ಲೆ ಮಿಂಟೋ ಸುಧಾರಣೆ, ಮೊದಲನೆ ಮಹಾಯುದ್ಧದಲ್ಲಾದ ಪರಿಣಾಮ, ಅಸಹಕಾರ ಚಳುವಳಿ, ಉಪ್ಪಿನ ಸತ್ಯಾಗ್ರಹ,
ಸೈಮನ್ ಕಮೀಷನ್ ಹೀಗೆ ಸಣ್ಣಪುಟ್ಟ ಘಟನೆಗಳು ನಡೆದು ಅದರಿಂದ ಪರಿಣಾಮಗಳನ್ನು ಅರಿತು ಮುನ್ನುಗ್ಗಲು
ಚೇತರಿಸಿಕೊಂಡರು. ೧೯೪೨ರ ಆಗಸ್ಟ್ ೮ರಲ್ಲಿ ಅಖಿಲ ಭಾರತ ಕಾಂಗ್ರೆಸ್ ಮಹಾಸಭೆಯ ತೀರ್ಮಾನದ ನಂತರ ಈ ಮಧ್ಯರಾತ್ರಿಯಿಂದಲೇ
ಇಡೀ ಭಯಂಕರ ದಬ್ಬಾಳಿಕೆ ಅತ್ಯಾಚಾರಗಳು ಆರಂಭವಾದವು.[12] ಗಾಂಧೀ ಕರೆಗೆ ಓಗೊಟ್ಟು ಈ ಭಾಗದಲ್ಲಿ ಜನ ಜಾಗೃತಿಗೊಂಡರು. ಬಳ್ಳಾರಿ ಜಿಲ್ಲೆಯಲ್ಲಿ
೧೯೪೨ ಆಗಸ್ಟ್ ೩ರಂದೇ ಇಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಪ್ರತಿಯೊಂದು ಹಳ್ಳಿಗೂ ಸಂಚರಿಸಿ ಜನತೆಯಲ್ಲಿ
ಜಾಗೃತಿ ತುಂಬಿ ಬ್ರಿಟಿಷರು ಭಾರತ ಬಿಟ್ಟು ತೊಲಗಲಿ ಎಂದು ಜಿಲ್ಲಾ ಜನತೆಯಲ್ಲಿ ಬೆಂಬಲ ಸೂಚಿಸಿ ಚಳುವಳಿ
ನಡೆಸಲು ಸಿದ್ದರಾದರು.
ಈ ಸಂದರ್ಭದಲ್ಲಿ ಬಳ್ಳಾರಿಯ
ಕಲೆಕ್ಟರ್ ಐ.ಎಂ. ಫ್ರಾಸರ್ ಇದ್ದರು. ಇವನು ಅನು ಸರಿಸಿದ ನೀತಿಗಳಿಂದ ೧೯೪೩ರಲ್ಲಿ ವರ್ಗಾಯಿಸಲಾಯಿತು.
ನಿರ್ದಾಕ್ಷಿಣ್ಯವಾಗಿ ಸ್ವಾತಂತ್ರ್ಯ ಹೋರಾಟಗಾರರನ್ನು ಸೆರೆಮನೆಗೆ ತಳ್ಳುತ್ತಿದ್ದನು. ಬಳ್ಳಾರಿ ಭಾಗದಲ್ಲಿ
ಕ್ವಿಟ್ ಇಂಡಿಯಾ ಚಳುವಳಿ ಪ್ರಾರಂಭವಾದುದು ಮೊದಲು ಗ್ರಾಮಮಟ್ಟದಲ್ಲಿ, ಉಜ್ಜನಿ, ತೂಲಹಳ್ಳಿ, ಆಲೂರು,
ಚಿಕ್ಕಜೋಗಿಹಳ್ಳಿ, ಕಮಲಾಪುರ ಮತ್ತು ದರೋಜಿ ಉಲ್ಲೇಖಾರ್ಹ. ಹೊಸಪೇಟೆ ಯಲ್ಲಿ ತಿರುಮಲರಾವ್, ಶಿವದೇಸಾಯಿ,
ಗಣಪತಿ ಮತ್ತು ಬೆಲ್ಲದ ಚೆನ್ನಪ್ಪನವರು ಭಾಗ ವಹಿಸಿದ್ದರು. ಕೊಟ್ಟೂರಿನಲ್ಲಿ ಗುರುಲಿಂಗಪ್ಪ, ಶರಣಪ್ಪ
ಮತ್ತು ನಂಜಪ್ಪ ಕ್ವಿಟ್ ಇಂಡಿಯಾ ಚಳುವಳಿ ನಡೆಸಿದ್ದರು. ನಂತರ ಹರಪನಹಳ್ಳಿಯಲ್ಲಿ ಶಿರಸಪ್ಪನವರ ಮುಖಂಡತ್ವದಲ್ಲಿ
ಆರಂಭವಾಯಿತು. ಅನಂತಶಯನಗುಡಿ, ಮಾದಿಹಳ್ಳಿ, ಆದವಾನಿ, ಕಲ್ಲುದೇವನಕುಂಟಿ ಮತ್ತು ಇತರೆಡೆಗಳಲ್ಲಿ ಚಳುವಳಿ
ಪ್ರಾರಂಭವಾಯಿತು. ೧೯೪೨ ಸೆಪ್ಟೆಂಬರ್ ೧೪ರಂದು ಅಲ್ಲೀಪುರ ಸೆರೆಮನೆಯಲ್ಲಿ ಲಾಠೀ ಪ್ರಹಾರವಾಯಿತು. ಅಲ್ಲಿದ್ದ
‘ಹೌ’ ಎನ್ನು ಅಧೀಕ್ಷಕ, ಸರ್ಕಾರದ ರಿಸರ್ವ ಪೋಲಿಸರೂ, ಸಿಪಾಯಿಗಳು ಸೇರಿ ಸುಮಾರು ೩೦೦ ಜನರನ್ನು ಲಾಠಿ
ಗಳಿಂದ ಹೊಡೆದು ತಾವೇ ದಣಿದರು. ಅನೇಕರಿಗೆ ಗಾಯಗಳಾಗಿ, ಅಪಾಯಗಳು ಸಂಭವಿಸಿ ದ್ದವು. ಆಗ ಸೆರೆಮನೆಗೆ
ಬಂದಿದ್ದ ಪ್ರಮುಖರೆಂದರೆ ರಾಜಗೋಪಾಲಾಚಾರಿ, ಕಾಮರಾಜ ನಾಯರ್, ಪೊಟ್ಟಿ ಶ್ರೀರಾಮುಲು, ಪೆರಿಯಾರ, ನೀಲಂ
ಸಂಜೀವರೆಡ್ಡಿ ಮತ್ತು ಕಲ್ಲೂರು ಸುಬ್ಬರಾವ್ ಈ ರೀತಿ ೩೦೦ ಜನ ೧೮ ಬ್ಲಾಕುಗಳಲ್ಲಿದ್ದರು.[13] ಬಳ್ಳಾರಿ ಜಿಲ್ಲೆಯ ಪೂರ್ವ ಭಾಗದಲ್ಲಿನ ಗೌಡ, ಶಾನುಭೋಗ ಮತ್ತು ತಳವಾರ, ಗ್ರಾಮಾಧಿಕಾರಿಗಳು
ರಾಜೀನಾಮೆ ಕೊಟ್ಟರು. ಒಟ್ಟು ೧೯೪೨ರ ಚಳುವಳಿಯಲ್ಲಿ ಭಾಗವಹಿಸಿದ್ದ ಹೋರಾಟಗಾರರನ್ನು ವೆಲ್ಲೂರು, ತಂಜಾವೂರು
ಜೈಲುಗಳಿಗೂ ಕಳುಹಿಸಲಾಯಿತು.
ಬಳ್ಳಾರಿ ಪಟ್ಟಣದಲ್ಲಿ
೧೯೪೨ ಆಗಸ್ಟ್ ೯ ರಂದು ‘ಮಾಡು ಇಲ್ಲವೇ ಮಡಿ’ ಠರಾವು ಗಳನ್ನು ಹೊರಡಿಸಿ, ಚಳುವಳಿಯು ಉಗ್ರರೂಪಕ್ಕೆ
ತಲುಪಲು ಕಾರಣವಾಯಿತು. ಅಂದು ಅಂಚೆ, ತಂತಿಯನ್ನು ಕತ್ತರಿಸಿದರು. ರೈಲ್ವೆ ನಿಲ್ದಾಣವನ್ನು ಸುಟ್ಟು,
ಖಜಾನೆ ಲೂಟಿ ಮಾಡಿ ದರು. ಈ ಕಾರಣದಿಂದ ಬ್ರಿಟಿಷ್ ಕಲೆಕ್ಟರ್ ಇಲ್ಲಿನ ಪ್ರಮುಖರನ್ನು ಸೆರೆಮನೆಗೆ ತಳ್ಳಿ
ಸ್ಥಾನಪದ್ಧತೆಯಲ್ಲಿಟ್ಟನು. ಆಗ ಆಸ್ತಿಪಾಸ್ತಿಗಳು ನಾಶವಾಗಿದ್ದು ಗಮನಾರ್ಹ. ತೂಲಹಳ್ಳಿ, ಕಂಚಿಕೆರೆ,
ಕುರುಗೋಡು, ಕಲ್ಲುದೇವನಕುಂಟೆ, ಮಾಗಳದಲ್ಲಿ ಗ್ರಾಮಮಟ್ಟದಲ್ಲಿ ಚಳುವಳಿ ನಡೆಯಿತು. ಕೂಡ್ಲಿಗಿ ತಾಲ್ಲೂಕಿನ
ಚಿಕ್ಕಜೋಗಿಹಳ್ಳಿಯಲ್ಲಿ ಅಂಚೆಯನ್ನು ತಡೆದು ಚೀಲವನ್ನು ಸುಟ್ಟರು. ಇದೇ ರೀತಿ ಅನಂತಪುರದ ಕಾಲೇಜು ಆರ್ಸನ್
ಕೇಸು ಸಹ. ಅರಸನಾಳು ಕೊಟ್ರೇಗೌಡ, ಅಬಲೂರು ನಂಜಪ್ಪ, ಕೋ.ಚೆನ್ನಬಸಪ್ಪನವರು ಪದವಿ ವ್ಯಾಸಂಗ ಮಾಡುತ್ತಿ
ದ್ದರು. ೧೯೪೨ರಲ್ಲಿ ಕಾಲೇಜಿನ ಪ್ರಯೋಗಾಲಯಕ್ಕೆ ಬೆಂಕಿ ಹಚ್ಚಿದರಲ್ಲದೆ, ವಿದ್ಯಾರ್ಥಿಗಳನ್ನು ಸಂಘಟಿಸಿ
ಚಳುವಳಿ ನಡೆಸಲು ಮುಂದಾದರು. ಆದರೆ ಅವರನ್ನು ಬಿಡಲಿಲ್ಲ. ಅಲ್ಲೀಪುರ, ವೆಲ್ಲೂರು ಸೆರೆಮನೆಗಳಿಗೆ ಕಳುಹಿಸಲಾಯಿತು.
ಅವರಿಗೆ ಅಂದಿನಿಂದ ‘ತ್ರಿಮಿಸ್ಕಟೀಯರ್ಸ್’ ಎನ್ನುತ್ತಾರೆ ಎಂದು ಅನೇಕ ಲೇಖಕರು ತಿಳಿಸಿದ್ದಾರೆ (ಕೋ.
ಚೆನ್ನಬಸಪ್ಪನವರನ್ನು ಭೇಟಿ ಮಾಡಿದಾಗ ನಮ್ಮ ಕಾಲೇಜಿನಲ್ಲಿ ಯಾರೋ ಮಾಡಿರಬಹುದು, ನಾನು ಇದರಲ್ಲಿ ಭಾಗವಹಿಸಿ
ರಲಿಲ್ಲ ಎನ್ನುತ್ತಾರೆ).
ಸ್ವಾತಂತ್ರ್ಯ ಹೋರಾಟದಲ್ಲಿ
ಕಂಡುಕೊಂಡ ಕೆಲವು ಅಂಶಗಳೆಂದರೆ ಬಳ್ಳಾರಿ ಜಿಲ್ಲೆಯ ಸಾಮಾನ್ಯ ಜನರನ್ನು ಚಿತ್ರಿಸುವಲ್ಲಿ ಅಲಕ್ಷಿಸಲಾಗಿದೆ.
ಇದು ಮೇಲ್ವರ್ಗದವರ ಹೋರಾಟ ವಾಗಿದ್ದು ಕೆಳವರ್ಗಗಳ ಕಲ್ಪನೆ ಇಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಇಮಾಂಸಾಬ್,
ಅಕ್ಬರ್ ಸಾಹೇಬ್, ಹುಸೇನಪ್ಪ ಎಂಬ ಮುಸ್ಲಿಮರು ಭಾಗವಹಿಸಿದ್ದರು ಅವರನ್ನು ಕಣೆಗಣಿಸಲಾಗಿದೆ. ಈ ಹೋರಾಟದಲ್ಲಿ
ಬಿ. ವೆಂಕಮ್ಮ, ಆದವಾನಿ ರಾಮಕ್ಕ, ವೀರವ್ವ, ರಾಕಟ್ಲ, ಸುಲಕ್ಷಣ ಬಾಯಿ, ಪ್ರಮೀಳಾ, ನಾಗಮ್ಮ, ಬಳ್ಳಾರಿ
ಸಿದ್ಧಮ್ಮ, ಸುಂದರಮ್ಮ, ಹರಪನಹಳ್ಳಿ ಲಕ್ಷ್ಮೀ ದೇವಿ, ಬಳ್ಳಾರಿ ರುದ್ರಮ್ಮ ಮೊದಲಾದ ಮಹಿಳೆಯರು ಭಾಗವಹಿಸಿದ್ದು,
ಇವರ ಪಾತ್ರ ಸ್ವಾಗತಾರ್ಹ. ಧಾರ್ಮಿಕ ನೆಲೆಗಳು ಹೋರಾಟಕ್ಕೆ ಪ್ರೇರಣೆ ನೀಡಿದ್ದು ಕಂಡುಬಂದಿದೆ. ಕೊಟ್ಟೂರು,
ಉಜ್ಜಿನಿ, ಕಾನಾಮಡುಗು, ಚೆಳ್ಳಗುರ್ಕಿ, ಹಂಪಿ, ಕುರುಗೋಡು, ಸೊಂಡೂರು, ಮೈಲಾರಗಳಲ್ಲಿ ಭಜನೆ, ಕೀರ್ತನೆ,
ಉತ್ಸವ, ಪ್ರಾರ್ಥನೆ ಸಮಾರಂಭಗಳು ನಡೆದವು.
ಸ್ವಾತಂತ್ರ್ಯ ಹೋರಾಟದ
ಕಲ್ಪನೆ, ಪ್ರಭಾವವನ್ನು ನಾಟಕ, ಲಾವಣಿ, ಕಾದಂಬರಿಗಳಲ್ಲಿ ತಿಳಿಯಬಹುದು. ಸ್ವಾತಂತ್ರ್ಯ ಹೋರಾಟ ಮತ್ತು
ಕನ್ನಡ ಸಾಹಿತ್ಯ ಸಮ್ಮೇಳನಗಳು ಸಹ ಉಲ್ಲೇಖನಾರ್ಹ. ಕವಿ, ಸಾಹಿತಿಗಳ ಪಾತ್ರ ಸ್ವಾತಂತ್ರ್ಯ ಹೋರಾಟದಲ್ಲಿ
ಅಪಾರವಾದುದು. ಉದಾ. ಹೀ.ಮ. ನಾಗಯ್ಯ, ಬೀ.ಚಿ., ಜೋಳದರಾಶಿ ದೊಡ್ಡನಗೌಡರು, ಸಮೂಹ ಮಾಧ್ಯಮದಲ್ಲಿ ಸಹ
ಹೋರಾಟದ ಅಲೆಯನ್ನು ಎಲ್ಲರಿಗೂ ಬಡಿದೆಬ್ಬಿಸುವಂತೆ ಪತ್ರಿಕೆ, ರೇಡಿಯೋ, ಚಲನಚಿತ್ರಗಳಲ್ಲಿ ಹೋರಾಟದ
ವಿಷಯವನ್ನು ಪ್ರಸಾರ ಮಾಡುತ್ತಿದ್ದರೆಂದು ತಿಳಿಯಬಹುದು. ೧೯೩೬ರಲ್ಲಿ ಜಯ ಕರ್ನಾಟಕ ಪತ್ರಿಕೆ, ಗರ್ಜನೆ
(೧೯೪೭), ರೈತರಾಜ್ಯ (೧೯೪೦) ಮತ್ತು ಕೋ. ಚೆನ್ನಬಸಪ್ಪನವರು ೧೯೪೮ರಲ್ಲಿ ರೈತ ಪತ್ರಿಕೆ ಹೊರತಂದು
ಪ್ರಸಾರ ನಡೆದಿತ್ತು.
ಸ್ವಾತಂತ್ರ್ಯ ಹೋರಾಟದಲ್ಲಿ
ಬಳ್ಳಾರಿ ಸೆರೆಮನೆವಹಿಸಿದ ಪಾತ್ರ ಸ್ಮರಣೀಯ. ಆಗ ಸಂಘ, ಸಂಸ್ಥೆಗಳು ಹೋರಾಟಕ್ಕೆ ಸ್ಪಂದಿಸಿದ್ದನ್ನು
ನೋಡಬಹುದು. ಮಲ್ಲಸಜ್ಜನ ವ್ಯಾಯಾಮ ಶಾಲೆ, ಕಸ್ಮೋಪಾಲಿಟನ್ ಕ್ಲಬ್, ಥಿಯೋಸಾಫಿಕಲ್ ಸೊಸೈಟಿ, ಟೌನ್ ರೀಡಿಂಗ್
ರೂಮ್ಸ್ನ್ನು ಹೆಸರಿಸಬಹುದು. ಧಾರ್ಮಿಕ ಮಠಗಳು ಸಹ ಪರೋಕ್ಷವಾಗಿ ಹೋರಾಟಕ್ಕೆ ಸ್ಫೂರ್ತಿ ನೀಡಿವೆ.
ಉದಾ. ಮಂತ್ರಾಲಯ, ಬಳ್ಳಾರಿ ರಾಘವೇಂದ್ರ ಸ್ವಾಮಿ ಮಠಗಳು ಉಜ್ಜನಿ ಸಿದ್ದೇಶ್ವರ ಮಠ, ಕಾನಾಮಡುಗು ಶರಣಬಸವೇಶ್ವರ
ಮಠ ಮೊದಲಾದವು.
ಒಟ್ಟಾರೆ ಬಳ್ಳಾರಿ
ಜಿಲ್ಲೆಯಲ್ಲಿ ಆದಂತ ಸ್ವಾತಂತ್ರ್ಯ ಹೋರಾಟ ಕಲೆಕ್ಟರುಗಳನ್ನಲ್ಲದೆ, ಸಂಪೂರ್ಣ ಬ್ರಿಟಿಷರ ಆಡಳಿತವನ್ನು
ಭಾರತದಿಂದ ತೊಲಗಿಸಲು ಪ್ರಯತ್ನಿಸಲಾಯಿತು. ನಾಮನಿರ್ದೇಶನಕ್ಕೆ ಮಾತ್ರ ಕಲೆಕ್ಟರುಗಳು, ಹೋರಾಟದ ವಿವಿಧ
ಮುಖಗಳನ್ನು ಅವಲೋಕಿಸಿ ದಾಗ ಇಡಿಯಾಗಿ ಭಾರತವನ್ನು ಅವಲಂಬಿಸಿತ್ತು, ಬಳ್ಳಾರಿ ಹೊರತಾಗಿರಲಿಲ್ಲ. ಈ
ರೀತಿ ಸಂಘ ಸಂಸ್ಥೆ, ಹೋರಾಟಗಾರರ ಶ್ರಮದಿಂದ ೧೯೪೭ ಆಗಸ್ಟ್ ೧೫ ರಂದು ಸ್ವಾತಂತ್ರ್ಯ ಲಭಿಸಿತು. ಇದಕ್ಕೆ
ಬಳ್ಳಾರಿ ಜಿಲ್ಲೆಯವರ ಪಾತ್ರ ದೇಶದಲ್ಲಿ ಅಲ್ಪವಾದರೂ ಮಹತ್ವಾಕಾಂಕ್ಷೆ ಯಿಂದ ಕೂಡಿದ್ದಿತು. ಬಳ್ಳಾರಿ
ಜಿಲ್ಲೆಯ ನೂರಾರು ಸ್ವಾತಂತ್ರ್ಯ ಹೋರಾಟಗಾರರ ಫಲವಾಗಿ ಇಲ್ಲಿನ ಸ್ವಾತಂತ್ರ್ಯ ಹೋರಾಟಕ್ಕೆ ಒಂದು ಹೊಸ
ಆಯಾಮ ಸಿಕ್ಕಿತ್ತು
ಖಿಲಾಫತ್ :ಬ್ರಿಟಿಷ್ ಸರ್ಕಾರ ಟರ್ಕಿ ದೇಶದ ಮುಸ್ತಫಾ ಕಮಾಲ್ ಗೆ ಟರ್ಕಿಯ ಸುಲ್ತಾನನ್ನು ಮೆಟ್ಟಿ ಹಾಕಲು ನೀಡಿದ
ಬೆಂಬಲಕ್ಕಾಗಿ ಭಾರತದ ಲಕ್ಷಾಂತರ ಮುಸ್ಲಿಮರು ವಿರೋಧಿಸಿದರು. ಮುಸ್ಲಿಮ್ ನಾಯಕರು ಸರ್ಕಾರದ ಈ ದುಷ್ಕಾರ್ಯವನ್ನು
ವಿರೋಧಿಸಲು ಖಿಲಾಫತ್ ಸಮಿತಿಯನ್ನು
ರಚಿಸಿದರು. ಖಿಲಾಪತ್ ಚಳವಳಿಯ ನಾಯಕ ಮೌಲಾನ ಅಬ್ದುಲ್.
ಖಿಲಾಪತ್ ಚಳುವಳಿ
: 1919 ರಿಂದ 1923: ಟರ್ಕಿಯಾ ಇಬ್ಬರು ಸಹೋದರರಾದ ಮಹ್ಮದ್ ಅಲಿ ಮತ್ತು ಶೌಕತ್ ಅಲಿ ಎಂಬುವುವರು ತಮ್ಮ
ಚಳುವಳಿಗೆ ಮಹಾತ್ಮ ಗಾಂಧೀಜಿಯವರ ಸಹಾಯವನ್ನು ಪಡೆದುಕೊಳ್ಳುತಾರೆ ಇದನ್ನೆ ಖಿಲಾಪತ್ ಚಳುವಳಿ ಎನ್ನುತ್ತೇವೆ.
ಆಧುನಿಕ ಭಾರತ
ಇತಿಹಾಸ
ಭಾರತೀಯ
ಪುನುರುಜ್ಜೀವನ I. ರಾಜ ರಾಂ ಮೋಹನ್ ರಾಯ್
ಭಾರತೀಯ ಪುನುರುಜ್ಜೀವನದ ಪಿತಾಮಹಾ ಜನನ:
1772 ರಲ್ಲಿ ಬಂಗಾಳದ ಬರ್ದ್ವಾನ ಜಿಲ್ಲೆಯ ರಾಧನಗರ್
ತಂದೆ : ರಮಾಕಾಂತ್ ರಾಯ್ ತಾಯಿ: ತಾರಿಣಿ ದೇವಿ
1814 ರಲ್ಲಿ ಅತ್ಮೀಯ ಸಭಾ ಸ್ಥಾಪನೆ ಇದು 1828 ರ ಆಗಸ್ಟ್ 20 ರಂದು ಕಲ್ಕತ್ತದಲ್ಲಿ ಬ್ರಹ್ಮಸಮಾಜವಾಗಿ
ಪರಿವರ್ತನೆಯಾಯಿತು
1829 ರ ಡಿಸೆಂಬರ್ 4 ರಂದು ಸತಿ ಪದ್ಧತಿ ನಿಷೇಧ ಈ ಸಮಯದಲ್ಲಿ ಭಾರತದಲ್ಲಿ ಬ್ರಿಟೀಷ್ ರ ಗೌರ್ನರ್
ಜನರಲ್ ಆಗಿದ್ದರು ವಿಲಿಯಂ ಬೆಲ್ಯೂಕ್ ಬಿರುದುಗಳು:
ಭಾರತೀಯ ಪುರುಜ್ಜೀವನದ ಪಿತಾಮಹಾ
ಭಾರತದ ರಾಷ್ಟ್ರೀಯತೆಯ ಪಿತಾಮಹಾ ಭಾರತೀಯ
ಪುರುಜ್ಜೀವನದ ಉಷಾತಾರೆ
ಅಧುನಿಕ ಬಂಗಾಳ ಗದ್ಯ ಸಾಹಿತ್ಯದ ಪಿತಾಮಹಾ ಭಾರತೀಯ
ಪತ್ರಿಕೋದ್ಯಮದ ಪ್ರವರ್ತಕ
1828 ರ ಆಗಸ್ಟ್ 20 ರಂದು ಕಲ್ಕತ್ತದಲ್ಲಿ ಸ್ಥಾಪಿತವಾದ ಬ್ರಹ್ಮಸಮಾಜ ರಾಜ ರಾಂ ಮೋಹನ್ ರಾಯ್ ರವರ
ಮರಣದ ನಂತರ
ವಿಭಜನೆಯಾಯಿತು: ದೇವೆಂದ್ರನಾಥ್ ಠಾಗೋರ್ ರವರಿಂದ ಅಧಿ ಬ್ರಹ್ಮ ಸಮಾಜ
ಕೇಶವ್ ಚಂದ್ರ ರವರಿಂದ ಭಾರತೀಯ ಬ್ರಹ್ಮ ಸಮಾಜ
2.ದಯಾನಂದ ಸರಸ್ವತಿ - ವೇದಗಳ ಅಧಾರದ ಮೇಲೆ ಹಿಂದು ಸಮಾಜವನ್ನು ಶುದ್ಧೀಕರಿಸಲು
ಪ್ರಯತ್ನಿಸಿದ ಮೊದಲ ರಸಋಷಿ
ಮೂಲಹೆಸರು: ಮೂಲಶಂಕರ ಜನನ: 1824 ರಲ್ಲಿ ಗುಜರಾತಿನ
ತಂಕಾರ ಗ್ರಾಮ ತಂದೆ : ಅಂಬ ಶಂಕರ ತಿವಾರಿ
ತಾಯಿ: ಅಮೃತ ಭಾಯಿ 1875ರ ಏಪ್ರಿಲ್ 10 ರಂದು ಲಾಹೋರ್
ನಲ್ಲಿ ಮೊದಲ ಆರ್ಯ ಸಮಾಜ ಸ್ಥಾಪನೆ
1877 ರಲ್ಲಿ ಮುಂಬೈನಲ್ಲಿ 2 ನೆ ಶಾಖೆ ಪ್ರಾರಂಭ
ತನ್ನ ಪ್ರಸಿದ್ದ ಕೃತಿಯಾದ ಸತ್ಯಾರ್ಥ ಪ್ರಕಾಶನ ದಲ್ಲಿ ವೇದಗಳಿಗೆ ಹಿಂತಿರುಗಿ ಎಂದು ಕರೆಕೊಟ್ಟರ. ಇದು ಆರ್ಯರ ಬೈಬಲ್
ಇವರ ಇರ ಕೃತಿಗಳು : ವೇದ ಭಾಷ್ಯ ಭೂಮಿಕ, ಭಾರತ ಭಾರತೀಯರಿಗೆ
3. ಸ್ವಾಮಿ
ವಿವೇಕಾನಂದ 1863 ರಿಂದ 1902
ಮೂಲ ಹೆಸರು: ನರೇಂದ್ರ ನಾಥ ದತ್ತ ಇವರಿಗೆ ಆಧ್ಯಾತ್ಮಿಕ ದಿವ್ಯ ಪುರುಷ ಎನ್ನುವರು
ಜನನ: 1863 ಜನವರಿ 12 ರಂದು : ಇದನ್ನು ವಿಶ್ವ ಯುವಕ ದಿನವನ್ನಾಗಿ ಆಚರಿಸುತ್ತಾರೆ
ತಂದೆ ವಿಶ್ವನಾಥ ದತ್ತ ತಾಯಿ: ಭುವನೇಷ್ವರಿ ಇವರ ಗುರು: ರಾಮಕೃಷ್ಣ ಪರಮ ಹಂಸ
1893 ಮೇ 31 ರಂದು ಅಮೇರಿಕಾದ ಚಿಕಾಗೋ ನಗರದಲ್ಲಿ ವಿಶ್ವಧರ್ಮ ಸಮ್ಮೇಳನದಲ್ಲಿ ಭಾರತವನ್ನು ಪ್ರತಿನಿಸಿದ್ದರು
1897 ರಲ್ಲಿ ಕಲ್ಕತ್ತಾದ ಬೇಲೂರಿನಲ್ಲಿ : ರಾಮಕೃಷ್ಣ ಮಿಷಿನ್ ಸ್ಥಾಪನೆ
ಸಂದೇಶ: ಯುವಕರೇ ಏಳಿ ಎದ್ದೇಳಿ ಗುರಿಮುಟ್ಟುವತನಕ ನಿಲ್ಲದಿರಿ , ಜನರ ಸೇವೆಯೇ ಜನರ್ಧಾನ ಸೇವೆ
ಪತ್ರಿಕೆಗಳು: ಪ್ರಭುಧ್ದ್ ಭಾರತ, ಉದ್ಬೋದನ ಬಿರುದು:
ವೇದಾಂತ ಕೇಸರಿ
4. ಸರ್
ಸೈಯದ್ ಅಹ್ಮದ್ ಖಾನ್ 1817 ರಿಂದ 1898
ಮುಸ್ಲಿಂ ಸಮುದಾಯದ ಉದ್ಧಾರಕ್ಕೆ ಅಲಿಘಡ್ ಚಳುವಳಿ ಪ್ರಾರಂಬಿಸಿದರು
ಅಂಜುಮಾನ್ ಸೇವಾ ಸಂಘ ಸ್ಥಾಪಸಿದರು ಇವರು ಮುಸ್ಲಿಂ
ಧರ್ಮದ ವೃದ್ಧ ಪಿತಾಮಹಾ
1875 ರಲ್ಲಿ ಅಲೀಘಡ್ ದಲ್ಲಿ ಓರಿಯಂಟಲ್ ಕಾಲೇಜ್ ಸ್ಥಾಪನೆ ಮುಂದೆ ಇದು ಅಲೀಘಡ್ ವಿಶ್ವ ವಿದ್ಯಾಲಯವಾಯಿತು
1888 ರಲ್ಲಿ ಇವರಿಗೆ " ನೈಟ್ ಹುಡ್" ಪ್ರಶಸ್ತಿ ನೀಡಲಾಯಿತು ಪತ್ರಿಕೆಗಳು: ತಹಜಿಲ್-ಉಲ್-ಅಖ್ಲಾಕ್
5.ಡಾ.
ಅನಿಬೆಸೆಂಟ್ : 1846 ರಿಂದ 1933
ಇವರು ಐರೀಷ್ ಮಹಿಳೆ 1846 ರಲ್ಲಿ ಐರ್ಲ್ಯಾಂಡಿನಲ್ಲಿ
ಜನನ
1893 ರಲ್ಲಿ ಥಿಯೋಸಾಪಿಕಲ್ ಸೊಸೈಟಿಯ ಸದಸ್ಯರಾಗಿ ಭಾರತಕ್ಕೆ ಬಂದರು 1907 ರಲ್ಲಿ ಇದರ ಅಧ್ಯಕ್ಷರಾದರು
ಕಾಂಗ್ರೇಸ್ಸಿನ ಪ್ರಥಮ ಮಹಿಳಾ ಅದ್ಯಕ್ಶೆ ಇವರು
1916 ರಲ್ಲಿ ಚನೈನ ಅಡಿಯಾರ್ ನಲ್ಲಿ ಹೋಂರೂಲ್ ಚಳುವಳಿ ಸ್ಥಾಪಿಸಿದರು
ಪತ್ರಿಕೆ: ಇಂಡಿಯಾ ಪತ್ರಿಕೆ ಆರಂಭಿಸಿದರು
ಕಾಂಗ್ರೇಸ್ಸಿನ ಪ್ರಥಮ ಭಾರತೀಯ ಮಹಿಳೆ : ಶ್ರೀಮತಿ ಸರೋಜಿನಿ ದೇವಿ ನಾಯ್ಡು
ಭಾರತೀಯ
ರಾಷ್ಟ್ರೀಯ ಕಾಂಗ್ರೇಸ್ (INC-INDIAN NATIONAL CONGRESS) ಸ್ಥಾಪನೆ
1885 ರಲ್ಲಿ ಮುಂಬೈನಲ್ಲಿ ಎ. ಓ. ಹ್ಯೂಂ. (A
O HUME) ರಿಂದ ಸ್ಥಾಪನೆ
ಅಧಿವೇಶನ 1885 ಡಿಸೆಂಬರ್ 28 ರಿಂದ 30 ವರ್ಷ 1886 ಸ್ಥಳ
ಕಲ್ಕತ್ತಾ
ಅದ್ಯಕ್ಷರು ಪ್ರಥಮ WC ಬ್ಯಾನರ್ಜಿ ದ್ವಿತೀಯಾ- ಮುಂಬೈ ದಾದಾ ಬಾಯಿ ನವರೋಜಿ ತೃತೀಯಾ
1887 ಮದ್ರಾಸ್ ಬದ್ರುದ್ದೀನ್
ತಯಾಬ್ಜಿ 4 ನೇಯದು 1888 ಅಲಹಾಬಾದ್ ಜಾರ್ಜ್ ಯುಲೆ
1907 ಸೂರತ್ ರಾಸ್ ಬಿಹಾರಿ ಬೋಷ್
ಕಾಂಗ್ರೇಸ್
ಸ್ಥಾಪನೆ ಉದ್ದೇಶ
1. ಭಾರತದಲ್ಲಿ ಬ್ರಿಟೀಶರ ಆಡಳಿತಕ್ಕೆ ಒತ್ತಾಯಿಸುವುದು 2.
ಭಾರತೀಯರಲ್ಲಿ ಜಾಗೃತಿ ಮೂಡಿಸುವುದು
3.ಬ್ರಿಟೀಶರ ಆಡಳಿತದಲ್ಲಿ ಭಾರತೀಯರು ಹೆಚ್ಚು ಹೆಚ್ಚು ಪಾಲ್ಗೊಳ್ಳೂವಂತೆ ಒತ್ತಾಯಿಸುವುದು
4.ಸಂವಿಧಾನದ ಸುದಾರಣೆಗೆ ಒತ್ತಾಯಿಸುವುದು 5.ವಿದೇಶದಲ್ಲಿ
ಭಾರತೀಯರ ಹಿತವನ್ನು ಕಾಪಾಡುವುದು
6.ಭಾರತೀಯರ ಸಮಸ್ಯಗಳಿಗೆ ಪರಿಹಾರವನ್ನು ಕಂಡುಕೊಳ್ಳುವುದು 7.ರಾಷ್ಟ್ರೀಯತೆಯ ಜಾಗೃತಿಯನ್ನು ಮೂಡಿಸುವುದು.
ಮಂದಗಾಮಿಗಳು
: 1885 ರಿಂದ 1905
ಸಂವಿಧಾನಾತ್ಮಕ ಹೋರಾಟದಲ್ಲಿ ನಂಬಿಕೆಯಿಟ್ಟು ಶಾಂತಿಯುತವಾಗಿ ಪ್ರತಿಭಟನೆ
ಮಾಡುವರು
ನಾಯಕರಗಳು: ದಾದಬಾಯಿ ನವರೋಜಿ, ಗೋಪಾಲ್ ಕೃಷ್ಣ ಗೋಖಲೆ, ಮೆಹ್ತಾ, WC ಬ್ಯಾನರ್ಜಿ, ಬದ್ರುದ್ದೀನ್
ತಯಾಬ್ಜಿ, ಸುರೇಂದ್ರನಾಥ್ ಬ್ಯಾನರ್ಜಿ, M
G ರಾನಡೆ, ಬ್ರಿಟೀಶ್
ಸರ್ಕಾರದ ಸಂಪತ್ತಿನ ಸೋರಿಕೆ ಸಿದ್ಧಾಂತವನ್ನು ಮೊಟ್ಟ ಮೊದಲಿಗೆ ತೋರಿಸಿಕೊಟ್ಟವರು "ದಾದ ಬಾಯಿ
ನವರೋಜಿ "ತನ್ನ ಕೃತಿಯಾದ Poverty and un-British
rule in India ದಲ್ಲಿ
1905 ರಲ್ಲಿ ಗೋಪಾಲ್ ಕೃಷ್ಣ ಗೋಖಲೆಯವರು ವಿದೇಶದಲ್ಲಿನ ಭಾರತೀಯರ ರಕ್ಷಣೆಗಾಗಿ ಸರ್ವೆಂಟ್ ಆಪ್ ಇಂಡಿಯಾ
ಸ್ಥಾಪಿಸಿದರು. 1885 ರಲ್ಲಿ INC ಸ್ಥಾಪನೆಯಾದಾಗ ಬ್ರಿಟೀಶ್ ವೈಸ್
ರಾಯ್ ಯಾಗಿದ್ದವರು ಲಾರ್ಡ್ ಡಫ್ರೀನ್
ತೀವ್ರಗಾಮಿಗಳು
1905 ರಿಂದ 1919 :
ಮಂದಗಾಮಿಗಳು ಭಾರತೀಯರ ಬೇಡಿಕೆಗಳನ್ನು ಈಡೇರಿಸುವಲ್ಲಿ ವಿಫಲವಾದಗ ತೀವ್ರಗಾಮಿಗಳು ಹುಟ್ಟುಕೊಂಡರು
ಇವರು ವಿಚಾರದಲ್ಲಿ ತೀವ್ರತೆಯನ್ನು ಹೊಂದಿದ್ದವರು, ನಾಯಕರುಗಳು:
ಲಾಲ್ ಬಾಲ್ ಪಾಲ್
ಲಾಲ ಲಜಪತ್ ರಾಯ್, ಬಾಲಗಂಗಾಧರನಾಥ್ ತಿಲಕ್ ಮತ್ತು ಬಿಪಿನ್ ಚಂದ್ರಪಾಲ್ ಮತ್ತು ಅರವಿಂದ್ ಘೋಷ್
1905
ರಲ್ಲಿ ಬಂಗಾಲದ ವಿಭಜನೆಯಾಯಿತು: ಮಾಡಿದವರು ಲಾರ್ಡ್ ಕರ್ಜನ್
1911 ರಲ್ಲಿ ಬಾಂಗ್ಲ ಒಗ್ಗೂಡಿಸಲಾಯಿತು.
ಭಾಲಗಂಗಾದರ ನಾಥ್ ತಿಲಕ್: ಇವರು ಲೋಕಮಾನ್ಯ ತಿಲಕರೆಂದು ಪ್ರಸಿದ್ದಿಯಾಗಿದ್ದರು
ಜನನ: 1856 ಜುಲೈ 23 ರಂದು ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಚಿಕಲ್ ಎಂಬಲ್ಲಿ
ಘೋಷಣೆ: "ಸ್ವರಾಜ್ಯವೇ ನನ್ನ ಜನ್ಮಸಿದ್ಧ ಹಕ್ಕು" ಪತ್ರಿಕೆಗಳು:ಮರಾಠಿ ಭಾಷೆಯ ಕೇಸರಿ
ಮತ್ತು ಆಂಗ್ಲಭಾಷೆಯ ಮಾರಾಠ
ವಂಗ ಭಂಗ ಚಳುವಳಿಯನ್ನು ಸ್ಥಾಪಿಸಿದರು 1906
ರಲ್ಲಿ ಅಘಾಖಾನ್ ರವರಿಂದ ಡಾಕಾ ಮುಸ್ಲಿಂ ಲೀಗ್ ಸ್ಥಾಪನೆ
1916 ರಲ್ಲಿ ಹೋಂ ರೂಲ್ ಚಳುವಳಿ ಸ್ಥಾಪನೆ ಲಾಲ
ಲಜಪತ್ ರಾಯ್ ರು UNHAPPY ಕೃತಿಯನ್ನು ರಚಿಸಿದರು
ಗಾಂಧಿ
ಯುಗ 1919 ರಿಂದ 1947: ಇದರ ನಾಯಕರು ಮಹಾತ್ಮ ಗಾಂಧಿಜೀ
ಜನನ: 1869 ಅಕ್ಟೋಬರ್ 2 ರಂದು ಇದನ್ನು ವಿಶ್ವ ಅಹಿಂಸಾ ದಿನವನ್ನಾಗಿ ಅಚರಿಸುತ್ತಾರೆ.
ತಂದೆ: ಕರಮಚಂದ ಗಾಂಧಿ ತಾಯಿ: ಪುತಳೀ ಬಾಯಿ
1893 ರಲ್ಲಿ ಬಾಂಬೆ ದಾದ ಅಬ್ದುಲ್ಲಾ ಕಂಪನಿಯ ದಾವೆಯ ಮೊಖದ್ದಮ್ಮೆಯನ್ನು ಹೂಡಲು ಆಫ್ರೀಕಾಕಕ್ಕೆ ಹೋದರು
1915 ರಲ್ಲಿ ಭಾರತಕ್ಕೆ ಮರಳಿದರು ಆಗ ಗುಜರಾತ್ ನಲ್ಲಿ ಸಬರಮತಿ ಆಶ್ರಮ ಸ್ಥಾಪಿಸಿದರು ಉಪ್ಪುನ ಸತ್ಯಾಗ್ರಹವನ್ನು
ಸಹಾ ಇಲ್ಲೇ ಪ್ರಾರಂಬಿಸಿದರು. ದಕ್ಷಿಣ ಆಫ್ರೀಕಾದಲ್ಲಿ ನೀಟಾಲ್ ಇಂಡೀಯಾ ಎಂಬ ಪತ್ರಿಕೆ ಸ್ಥಾಪಿಸಿದರು
ಪತ್ರಿಕೆಗಳು END INDIA, ನವಜೀವನ ಇವರ ಆತ್ಮಕಥನ: My experiment with Truth
1919 ರ ಪೆಬ್ರವರಿ 19 ರಂದು ರೌಲತ್ ಕಾಯಿದೆ ಜಾರಿಗೆ ಬಂತು
1919 ಏಪ್ರಿಲ್ 13 ರಂದು ಪಂಜಾಬ್ ನ ಜಲಿಯನ್ ವಾಲಾ ಬಾಗ್ ಹತ್ಯಕಾಂಡ ನಡೆಯಿತು.
ಇದೊಂದು ಅವಮಾನವೀಯ ಘಟನೆ, ಮೇಲ್ಕಂಡ ದಿನಾಂಕದಂದು ಪಂಜಾಬ್ ನ ಜಲಿಯನ್ ವಾಲ್ ಬಾಗ್ ಎಂಬ ಸ್ಥಳದಲ್ಲಿ
ಜನರು ಸೇರಿ ಸಭೆ ನಡೆಸುತಿದ್ದರು ಈ ಸಭೆಯಲ್ಲಿ ಸ್ವಾಭಿಮಾನಿ ಭಾರತೀಯರೆಲ್ಲರು ಭಾಗವಹಿಸಿದ್ದರು, ಸಭೆ
ಸೇರಿದ್ದ ಸ್ಥಳವೂ ಒಂದು ವಿಶಾಲವಾದ ಅಂಗಳವಾಗಿದ್ದು ಕೇವಲ ಒಂದೇ ಒಂದು ಪ್ರವೇಶ ದ್ವಾರವಿರುತ್ತದೆ ಆಗ
ಅದನ್ನು ಗಮನಿಸಿದ ಬ್ರಿಟೀಶ್ ಸೇನಾನಿ ಜನರಲ್ ಡಯರ್ ಎಲ್ಲರ ಮೇಲೆ 1650 ಗುಂಡು ಹಾರಿಸುತ್ತಾನೆ ಈ ಘಟನೆಯಲ್ಲಿ
379 ಜನರು ಸತ್ತು 1208 ಜನ ಗಾಯಗೊಳ್ಳುತ್ತಾರೆ 1923
ದೇಶಬಂಧು ಎಂದು ಖ್ಯಾತಿ ಪಡೆದ ಚಿತ್ತರಂಜನ್ ದಾಸ್ ಮತ್ತು ಮೋತಿಲಾಲ್ ನೆಹರು ರವರು ಸೇರಿ "ಸ್ವರಾಜ್"
ಪಕ್ಷವನ್ನು ಸ್ಥಾಪಿಸಿದರು ಆದರೆ 1926 ರಲ್ಲಿ ಚಿತ್ತರಂಜನ್ ದಾಸ್ ರವರ ಮರಣದ ನಂತರ ಇದೂ ಸಹ ಹಂತ್ಯವಾಯಿತು. ಸೈಮನ್ ಕಮೀಷನ್: 1927 ರಲ್ಲಿ ಸೈಮನ್ ಆಯೋಗ(ಕಮೀಷನ್) ಭಾರತಕ್ಕೆ ಬಂದಾಗ ದೇಶದಾದ್ಯಂತ ವಿರೋಧಿಸಲಾಯಿತು. ಆಗ
ನಡೆದ ಪೋಲಿಸರ ಲಾಠಿ ಚಾರ್ಜ್ ನಲ್ಲಿ ತೀವ್ರಗಾಮಿ ನಾಯಕರಲ್ಲೊಬ್ಬರಾದ ಲಾಲ ಲಜಪತ್ ರಾಯರು ಹತ್ಯವಾದರು. ಲಾಹೋರ್ ಕಾಂಗ್ರೇಸ್ಸು: 1929-1930: 1930 ಜನವರಿ 26 ರಂದು
ಲಾಹೋರ್ ಅಧಿವೇಷನದಲ್ಲಿ "ಸ್ವರಾಜ್ಯ ಘೋಷಣೆ"ಯಾಯಿತು ಅಸಹಕಾರ ಚಳುವಳಿ :
1920 ರಿಂದ 1922:: ಮಹಾತ್ಮ ಗಾಂಧೀಜಿಯವರು
ಬ್ರಿಟೀಶ್ ಸರ್ಕಾರದ ವಿರುದ್ದ ಅಸಹಕಾರ ಚಳುವಳಿಯನ್ನು ಸಾರಿದ್ದರು ಆದರೆ 1922 ಪೆಬ್ರವರಿ 15 ಉತ್ತರ
ಪ್ರದೇಶದ ಗೋರಖ್ ಪುರ ಜಿಲ್ಲೆಯ ಚೌರಿ ಚೌರಾ ಎಂಬ ಗ್ರಾಮದಲ್ಲಿ ಭಾರತೀಯ ಸತ್ಯಾಗ್ರಹಿಗಳು ಪ್ರತಿಭಟನೆಯಲ್ಲಿ
ಅಲ್ಲಿನ ಪೋಲೀಸ್ ಠಾಣೆಗೆ ಬೆಂಕಿ ಹಚ್ಚಿದರು ಆಗ ಅದರಲ್ಲು 23 ಜನ ಪೋಲೀಸರು ಸಜೀವ ದಹನ ವಾದರು, ಅಹಿಂಸೆಯ
ಮೂಲ ಮಂತ್ರದಿಂದ ಪ್ರತಿಭಟಿಸುತ್ತಿದ್ದ ಮಹಾತ್ಮ ಗಾಂಧೀಜಿಯವರಿಗೆ ಇದರಿಂದ ಬೇಸರವಾಗಿ ಅಸಹಕಾರ ಚಳುವಳಿಯನ್ನು
ವಾಪಸ್ಸು ಪಡೆಯಲಾಯಿತು. ಮಹಾತ್ಮ ಗಾಂಧೀಜಿಯವರು
1917 ರಲ್ಲಿ ಮೊಟ್ಟಮೊದಲ ಭಾರಿಗೆ ಚಂಪಾರಣ್ಯ ಎಂಬ ಸ್ಥಳದಲ್ಲಿ ಸತ್ರ್ಯಾಗ್ರಹದಲ್ಲಿ ಪಾಲ್ಗೊಂಡ್ಡರು. 1918 ರಲ್ಲಿ ಗುಜರಾತ್ ನ ಖೇಡದಲ್ಲಿಯೂ ಸಹ ರೈತರ ಸತ್ಯಾಗ್ರಹದಲ್ಲಿ
ಪಾಲ್ಗೊಂಡಿದ್ದರು ಕಾನೂನು ಬಾಹಿರ ಚಳುವಳಿ
:1930 ರಿಂದ 1934
ಉಪ್ಪಿನ ಸತ್ಯಾಗ್ರಹ- ಮಹಾತ್ಮ ಗಾಂಧೀಜಿಯವರು 1930 ರ ಮಾರ್ಚ್ 12 ರಂದು ಸಬರಮತಿ ಆಶ್ರಮದಿಂದ ದಂಡಿ
ಮಾರ್ಗವಾಗಿ ಉಪ್ಪಿನ ಸತ್ಯಾಗ್ರಹ ಕೈಗೊಂಡರು. ಈ ಸತ್ಯಾಗ್ರಹದಲ್ಲಿ 78 ಜನ ಸತ್ಯಾಗ್ರಹಿಗಳಿದ್ದು ಮಹಾತ್ಮ
ಗಾಂಧೀಜಿಯವರು ಅತ್ಯಂತ ಹಿರಿಯ ವ್ಯಕ್ತಿಯಾದರೆ ಕರ್ನಾಟಕದ ಮೈಲಾರ ಮಹದೇವಪ್ಪ ಅತ್ಯಂತ ಕಿರಿಯ ವ್ಯಕ್ತಿಯಾಗಿದ್ದರು
ಆಗ ಅವರ ವಯಸ್ಸು ಕೇವಲ 18 1930 ರ ಏಪ್ರಿಲ್ 30 ರಂದು ದಂಡಿ ತಲುಪಿದ ಸತ್ಯಾಗ್ರಹಿಗಳು ಒಂದು ಇಡಿ
ಉಪ್ಪನ್ನು ತಯಾರಿಸಿ ರೂ 1600/- ಕ್ಕೆ ಅದನ್ನು ಹಾರಾಜು ಹಾಕಿ ಅದರ ಹಣವನ್ನು ತಮ್ಮ ಸತ್ಯಾಗ್ರಹಿಗಳ
ಹುಂಡಿಗೆ ಹಾಕಿದರು. ಭಾಗವಹಿಸಿದ ಇತರೆ ಸತ್ಯಾಗ್ರಹಿಗಳು ವಿಜಯ ಲಕ್ಷ್ಮಿ ಪಂಡಿತ್ (ವಿಶ್ವ ಸಂಸ್ಥೆಯ
ಪ್ರಥಮ ಮಹಿಳಾ ಭಾರತದ ಪ್ರತಿನಿಧಿ), ಸರ್ದಾರ್ ವಲ್ಲಭ ಬಾಯ್ ಪಟೇಲ್ (ಉಕ್ಕಿನ ಮನುಷ್ಯ), ಮೋತಿಲಾಲ್
ನೆಹರು ರವರ ಪತ್ನಿ ಸ್ವರೂಪ ರಾಣಿ, ಜವಹರಲಾಲ್ ನೆಹರು (ಸ್ವತಂತ್ರ ಭಾರತದ ಪ್ರಥಮ ಪ್ರಧಾನಿ) ಅವರ ಹೆಂಡತಿ
ಕಮಲಾದೆವಿ ನೆಹರು, ಮದನ್ ಗೋಪಾಲ್ ಮಾಳವೀಯಾ, KM ಮುನ್ಷಿ ಮತ್ತು ವಿಟ್ಠಲ ಭಾಯ್ ಪಟೇಲ್
ಕರನಿರಾಕರಣ
ಚಳುವಳಿ: 1928 ರಲ್ಲಿ ಗುಜರಾತ್ ನ ಖೇಡ ಮತ್ತು
ಬಾರ್ಡೋಲಿಯಲ್ಲಿ ನಡೆಯಿತು ಇದರ ನಾಯಕರು :ಮಹಾತ್ಮ ಗಾಂಧಿಜೀ ಮತ್ತು ಸರ್ದಾರ್ ವಲ್ಲಭ ಭಾಯ್ ಪಟೇಲ್
ಗಾಂಧಿ ಇರ್ವಿನ್ ಒಪ್ಪಂದ: 1931 ರ ಮಾರ್ಚ್ 5 ರಂದು ನಡೆಯಿತು ಇದರ ಮದ್ಯಸ್ಥಿಕೆ ವಹಿಸಿದ್ದವರು ಜಯಕರ್
ಮತ್ತು ಸಪ್ರೂ
ದುಂಡು ಮೇಜಿನ ಸಮ್ಮೇಳನ
ಮೊದಲನೇಯ 16 ನೇ ನವಂಬರ್ 1930 to 19 ನೇ ಜನವರಿ 1931 ಇಂಗ್ಲೇಂಡ್
ಇದರಲ್ಲಿ 89 ಪ್ರತಿನಿಧಿಗಳು ಭಾಗವಹಿಸಿದ್ದರು ಭಾರತದಿಂದ ಡಾ ಬಿ. ಆರ್. ಅಂಬೇಡ್ಕರ್ ಮತ್ತು ಮೈಸೂರು
ಸಂಸ್ಥಾನದ ದಿವಾನ ಸರ್ ಮಿರ್ಜಾ ಇಸ್ಮಾಯ್ಲಿ RYM
DONALD
ಎರಡನೇಯದು 7 ನೇ ಸೆಪ್ಟಂಬರ್1931 to 1 ನೇ ಡಿಸಂಬರ್ 1931 ಇಂಗ್ಲೆಂಡ್
ಮೊದಲ ಭಾರಿಗೆ ಕಾಂಗ್ರೇಸ್ಸಿನ ಏಕೈಕ ಪ್ರತಿನಿಧಿಯಾಗಿ ಮಹಾತ್ಮ ಗಾಂಧೀಜು ಭಾಗವಹಿಸಿದರು
ಮುಸ್ಲಿಂ ಸಮುದಾಯದ ಪ್ರತಿನಿಧಿ: ಮಹ್ಮದ್ ಇಕ್ಬಾಲ್, ಕೈಗಾರಿಕೋದ್ಯಮದ ಪ್ರತಿನಿಧಿ: ಜಿ.ಡಿ. ಬಿರ್ಲಾ
ಹಿಂದುಗಳ ಪರವಾಗಿ ಸರೋಜಿನಿ ದೇವಿ ನಾಯ್ಡು ಮತ್ತು ಮದನ್ ಮೋಹನ್ ಮಾಳವಿಯಾ RYAM
DONALD
3 ನೇಯದು 17 ನೇ ನವಂಬರ್ 1932 to 24 ನೇ ಡಿಸೆಂಬರ್ 1932 ಇಂಗ್ಲೆಂಡ್
ಎರಡನೇಯ ಸಮ್ಮೇಳನದಲ್ಲಿ ಮಹ್ಮದ್ ಅಲಿ ಜಿನ್ನ ಮುಸ್ಲಿಂ ಸಮುದಾಯಕ್ಕಾಗಿ ಪ್ರತ್ಯೇಕ ಮತ ಕ್ಷೇತ್ರ ಮತ್ತು
ಪ್ರತ್ಯೇಕ ರಾಷ್ಟ್ರದ ಬೇಡಿಕೆ ಇಟ್ಟರು ಅದೇ ರೀತಿ ಡಾ. ಬಿ ಅರ್ ಅಂಬೇಡ್ಕರ್ ತಮ್ಮ ನಿಮ್ನ ವರ್ಗದವರಿಗೆ
ಪ್ರತ್ಯೇಕ ಮತ ಕ್ಷೇತ್ರ ಮತ್ತು ಪ್ರತ್ಯೇಕ ರಾಷ್ಟ್ರದ ಬೇಡಿಕೆ ಇಟ್ಟರು ಇದರಿಂದ ಬೇಸತ್ತ ಮಹಾತ್ಮ ಗಾಂಧೀಜಿರವರು
ಬಂದ ದಾರಿಗೆ ಸುಂಕವಿಲ್ಲ ಅಂತ ಮರಳಿ ಭಾರತಕ್ಕೆ ಬಂದರು ಮತ್ತು ಮಹಾರಷ್ಟ್ರದ ಪೂನಾದಲ್ಲಿನ ಎರವಾಡ ಜೈಲ್
ನಲ್ಲಿ ಇದನ್ನು ವಿರೋದಿಸಿ ಉಪವಾಸ ಸತ್ಯಾಗ್ರಹ ಕೈಗೊಂಡರು, ಅದಕ್ಕಾಗಿ ಪ್ರಮುಖ ನಾಯಕರಗಳು ಡಾ,ಅಂಬೇಡ್ಕರ್
ರವರ ಮನವೊಲಿಸಿ ತಮ್ಮ ನಿರ್ದಾರವನ್ನು ಕೈ ಬಿಡಲು ಕೇಳೀಕೊಂಡ ನಂತರ ದಿನಾಂಕ 24ನೇಯ ಸೆಪ್ಟಂಬರ್
1932 ರಲ್ಲಿ ಮಹಾತ್ಮ ಗಾಂಧೀಜಿ ಮತ್ತು ಅಂಬೇಡ್ಕರ್ ರವರ ನಡುವೆ ಪೂನಾ ಒಪ್ಪಂದವಾಯಿತು.
ಕ್ಲಿಪ್ತ್ ಆಯೋಗ: 1942 ರಲ್ಲಿ ನಡೆಯಿತು ಚಲೇಜಾವ್ ಚಳುವಳಿ: 1942 ರಲ್ಲಿ ನಡೆಯಿತು ಆಗ ಗಾಂಧೀಜಿಯವರು
ಭಾರತದ ಜನತೆಗೆ ಮಾಡು ಇಲ್ಲವೇ ಮಡಿ (DO OR DIE)ಎಂದು ಸಂದೇಶ ಕೊಟ್ಟರು.ಈ ಚಳುವಳಿಯ ನಾಯಕರು ಜಯಪ್ರಕಾಶ್ ನಾರಾಯಣ್
ಮೌಂಟ್
ಬ್ಯಾಟನ್ ಆಯೋಗ:
ಇವರು ಸ್ವಂತಂತ್ರ ಭಾರತದ ಮೊದಲ ಗೌರ್ನರ್ ಜನರಲ್, ಭಾರತ ಮತ್ತು ಪಾಕಿಸ್ತಾನದ ವಿಭಜನೆಗೊಳಿಸಿದ ಗೌರ್ನರ್
ಸ್ವತಂತ್ರ ಭಾರತದ ಮೊದಲ ಭಾರತೀಯ ಗೌರ್ನರ್ ಜನರಲ್ ಸಿ. ರಾಜಗೋಪಾಲ ಚಾರಿ
ಬಂಗಾಳದ ಮೊದಲ ಗೌರ್ನರ್ - ರಾಬರ್ಟ್ ಕ್ಲೈವ್ 1757 ರಿಂದ 1760
ಬಂಗಾಳದ ಕೊನೆಯ ಗೌರ್ನರ್ - ವಾರ್ನ್ ಹೇಸ್ಟಿಂಗ್ಸ್ 1772 ರಿಂದ 1774
ಬಂಗಾಳದ ಮೊದಲ ಗೌರ್ನರ್ ಜನರಲ್ - ವಾರನ್ ಹೇಸ್ಟಿಂಗ್ಸ್ 1774 ರಿಂದ 1785
ಬಂಗಾಳದ ಕೊನೆಯ ಗೌರ್ನರ್ ಜನರಲ್ - ಲಾರ್ಡ್ ವಿಲಿಯಂ ಬೆಂಟಿಂಗ್ 1823 ರಿಂದ 1833
(ಇವರ ಕಾಲದಲ್ಲಿ ಭಾರತದಲ್ಲಿ ಭಾಲಗಂಗಾಧರ್ ತಿಲಕ್ ರಿಂದ ಸತಿ ಸಹಗಮನ ಪದ್ಧತಿ ನಿರ್ಮೂಲವಾಯಿತು)
ಭಾರತದ ಮೊದಲ ಗೌರ್ನರ್ ಜನರಲ್ - ಲಾರ್ಡ್ ವಿಲಿಯಂ ಬೆಂಟಿಂಗ್ 1833 ರಿಂದ 1835
ಭಾರತದ ಕೊನೆಯ ಗೌರ್ನರ್ ಜನರಲ್ - ಲಾರ್ಡ್ ಕ್ಯಾನಿಂಗ್ 1856 ರಿಂದ 1858
ಭಾರತದ ಮೊದಲ ವೈಸರಾಯ್ - ಲಾರ್ಡ್ ಕ್ಯಾನಿಂಗ್ - 1858 ರಿಂದ 1862
ಭಾರತದ ಕೊನೆಯ ವೈಸರಾಯ್ - ಲಾರ್ಡ್ ಮೌಂಟ್ ಬ್ಯಾಟನ್ ಇವರು ಬ್ರಿಟೀಶ್ ಸಾಮ್ರಾಜ್ಯದ ಕೊನೆಯ ಮತ್ತು
ಸ್ವತಂತ್ರ ಭಾರತದ ಮೊದಲ ವಿದೇಶಿ ಗೌರ್ನರ್ ಜನರಲ್
ಬಾಂಬ್ ಹೆಸರು : ಲಿಟ್ಲ್ ಬಾಯ್ ( littl boy)
2ನೇಯ ಮಹಾಯುದ್ದದ ಸಂದರ್ಭದಲ್ಲಿ ಜಪಾನಿನಲಿ ಕೆಳಕಂಡ ಸ್ಥಳಗಳಲ್ಲಿ ಬಾಂಬ್ ಹಾಕಲಾಯಿತು
1945 ಆಗಸ್ಟ್ 6 ರಂದು ಹಿರೋಶಿಮಾ 1945 ಆಗಸ್ಟ್
9 ರಂದು ನಾಗಸಾಕಿ
1882 ರಲ್ಲಿ ವಿಶ್ವದಲ್ಲಿ ಪ್ರಪ್ರಥಮವಾಗಿ ಮೇಡಂ ಬ್ಲವಾಟಿ ಮತ್ತು ಕರ್ನಲ್
ಓಲ್ಕಾಟ್
ಥಿಯೋಸಾಪಿಕಲ್ ಸೊಸೈಟಿ ಸ್ಥಾಪಿಸಿದರು ( ಕನ್ನಡದಲ್ಲಿ ದಿವ್ಯಾ ಸಭಾ)
ಖಾಯಂ ಜಮೀನ್ದಾರಿ ಪದ್ಧತಿ: 1793 ರ ಮಾರ್ಚ್ 22 ರಂದು ಕಾರ್ನ್ವಾಲೀಸ್ ಬಂಗಾಳದಲ್ಲಿ ಸ್ಥಾಪಿಸಿದನು
ರೈತವಾರಿ ಪದ್ಧತಿ: 1820 ರಲ್ಲಿ ಮೊದಲು ಮದ್ರಾಸಿನಲ್ಲಿ ಮತ್ತು ನಂತರ ಮುಂಬೈ ನಲ್ಲಿ ಥಾಮಸ್ ಮನ್ರೋ
ಸ್ಥಾಪಿಸಿದ
ಕ್ರಾಂತಿ ಕಾರಿಗಳು: ವಾಸುದೇವ ಬಲವಂತ್ ಫಡ್ಕೆ:ಇವನು ಕ್ರಾಂತಿಯುಗದ ಪ್ರವರ್ತಕ ಎನ್ನುತ್ತಾರೆ, ಇವನು
ಪೂನಾದಲ್ಲಿ ಜನಿಸಿದವಿ ಡಿ ಸಾವರ್ಕರ್: ಪೂರ್ಣ ಹೆಸರು ವಿನಾಯಕ ದಾಮದೋರ ಸಾವರ್ಕರ್ ಜನನ: ಮಹಾರಷ್ಟ್ರದಲ್ಲಿ
1857 ರ ದಂಗೆಯನ್ನು ಪ್ರಥಮ ಸ್ವಾತಂತ್ರ ಸಂಗ್ರಾಮ ಎಂದು ಕರೆದನು
1904 ರಲ್ಲಿ ಲಂಡನ್ ನಲ್ಲಿ ಅಭಿನವ ಭಾರತ ಎಂಬ ಗುಪ್ತ ಸಂಘವನ್ನು ಸ್ಥಾಪಿಸಿದನು
ಇನ್ಕ್ವಿಲಾಬ್ ಪತ್ರಿಕೆಯನ್ನು ಮೊದಲಿಗೆ ಹೊರಡಿಸಿದನು ಮ್ಯಾಜಿನಿ
ಎಂಬ ಪುಸ್ತಕವನ್ನು ಬರೆದು ಕ್ರಾಂತಿಕಾರಿಗೆಳಿಗೆ ಹಂಚಿದನು
ಕ್ರಾಂತಿಕಾರಿಗಳಲ್ಲಿ ಅತಿ ಹೆಚ್ಚು (ದೀರ್ಘ) ಕಾಲ ಜೈಲು ಶಿಕ್ಷೆ ಅನುಭವಿಸಿದವರಲ್ಲಿ ಇವರೇ ಮೊದಲಿಗರು
ಮದನ್ ಲಾಲ್ ಧಿಂಗ್ರಾ: 1909 ರಲ್ಲಿ ಕರ್ಜನ್ ಮೈಲ್
ಎಂಬುವವರನ್ನು ಗುಂಡಿಟ್ಟು ಕೊಂದರು
1909 ಅಗಸ್ಟ್ 17 ರಂದು ಗಲ್ಲುಗೇರಿಸಲಾಯಿತು. ಚಾಪೆಕರ್
ಸಹೋದರರು:1897 ರ ಜನವರಿ 22 ರಂದು ಬಂಗಾಳದ ಪ್ಲೇಗ್ ಅಧಿಕಾರಿಯನ್ನು ಗುಂಡಿಟ್ಟೂ ಕೊಂದರು. ಇವರಿಗೂ
ಗಲ್ಲು ಶಿಕ್ಷೆ ವಿಧಿಸಲಾಯಿತು
ಬರೀಂದ್ರ ಕುಮಾರ್ ಘೊಷ್: ಯುಗಾಂತರ ಪತ್ರಿಕೆ ಮತ್ತು ಭವಾನಿ ಮಂದಿರ ಪುಸ್ತಕವನ್ನು ಪ್ರಕಟಿಸಿದರು
ರಾಶ್ ಬಿಹಾರಿ ಬೋಸ್: 1912 ಡಿಸೆಂಬರ್ 23 ವೈಸ್ ರಾಯ್ ಲಾರ್ಡ್ ಹಾರ್ಡಿಂಜ್ ರ ಮೇಲೆ ಬಾಂಬ್ ದಾಳಿ
1942 ರಲ್ಲಿ ಬ್ಯಾಂಕಾಕ್ ನಲ್ಲಿ ಇಂಡಿಯಾ ಇಂಡಿಪೆಂಡೆಂಟ್ ಸ್ಥಾಪನೆ
ಲಾಲ್ ಹರ್ ದಯಾಳ್; ಪಂಜಾಬಿನ ಕ್ರಾಂತಿಕಾರಿ,ಹರ್ದ್ ಚಳುವಳಿಯ ಸ್ಥಾಪಕ,1911ರಲ್ಲಿ ಹರ್ದ್ ಪತ್ರಿಕೆಯ
ಸ್ಥಾಪನೆ& ಪ್ರಕಟನೆ
ರಾಂ ವಿನಾಬ್ ಬಿಸ್ಮಿಲ್ಲಾ: ಶಹಾ ಪುರದ ಕ್ರಾಂತಿಕಾರಿ ಮತ್ತು ಕಾಕೋರಿ (1925 ರಲ್ಲಿ ಲಕ್ನೋ ರೈಲನ್ನು
ಸರಪಲಿ ಎಳೆದು ನಿಲಿಸಿದ)ಪ್ರಕರಣದ ರುವಾರಿ
ಅಝಾದ್ ಚಂದ್ರಶೇಖರ್:1912ಡಿಸೆಂಬರ್ 26 ರಂದು ಬ್ರೀಟೀಶ್ ರ ವಿರುದ್ದ ದ ದಂಗೆಯಲ್ಲಿ ಬ್ರೀಟೀಶ್ ಅಧಿಕಾರಿ
ಮೇಲೆ ಕಲ್ಲೆಸೆದರು, ಹಿಂದುಸ್ಥಾನ್ ಸೋಸಿಯಲಿಸ್ಟ್ ರಿಪಬ್ಲಿಕ್ ಸಂಘದ ಸದಸ್ಯ
ಲಾಲಲಜಪತ್ ರಾಯ್:1928 ರಲ್ಲಿ ಕಾನ್ಫುರದಲ್ಲಿ ಹಿಂದುಸ್ಥಾನ್ ರಿಪಬ್ಲಿಕ ಅಸೋಸಿಯೇಷನ್ ಸ್ಥಾಪನೆ
ಭಗತ್ ಸಿಂಗ್ :ಪಂಜಾಬ್ ನ ಪುರುಷ ಸಿಂಹ ಮತ್ತು ಕ್ರಾಂತಿ ಕಾರಿ ಕಿಡಿ ನವಜಾತ ಭಾರತ ಸಭಾದ ಸ್ಥಾಪಕ
1928 ಡಿಸೆಂಬರ್ 17 ರಮ್ದು ಸ್ಯಾಂಡರ್ ನನ್ನು ಗುಂಡಿಟ್ಟು ಕೊಂದನು
ಇನ್ಕ್ವಿಲಾಬ್ ಜಿಂದಾಬಾದ್ ( ಕ್ರಾಂರಿ ಚಿರಾಯುವಾಗಲಿ ) ಎಂದು ಘೋಷಣೆ ಮಾಡಿದನು
1931 ಮಾರ್ಚ್ 31 ರಂದು ರಾಜ್ ಗುರು ರವರ ಜೊತೆ ಇವರನ್ನು ಲಹೋರ್ ನಲ್ಲಿ ಗಲ್ಲಿಗೇರಿಸಲಾಯಿತು
ಸುಭಾಷ್ ಚಂದ್ರ ಬೋಸ್ : ಕ್ರಾಂತಿಕರಿಗಳಲ್ಲಿ ಶ್ರೇಷ್ಠರು ಮತ್ತು " ನೇತಾಜಿ"
1897 ರಲ್ಲಿ ಒರಿಸ್ಸಾದ ಕಟಕ್ ನಲ್ಲಿ ಜನನ ತಂದೆ:
ಜಾನಕಿನಾಥ ಬೋಸ್ ತಾಯಿ: ಪ್ರಭಾವತಿ
INA ( Indian National Army) ಸ್ಥಾಪಕರು 1943 ರಲ್ಲಿ ಸಿಂಗಪುರದಲ್ಲಿ
ಸ್ವತಂತ್ರ ಭಾರತದ ತಾತ್ಕಾಲಿಕ ಸರ್ಕಾರದ ಸ್ಥಾಪಕದು 1938 ರ ಹರಿಪುರ ಮತ್ತು 1939ರ ಪ್ರಥಮ ಕಾಂಗ್ರೇಸ್
ಅಧ್ಯಕ್ಷರು
ಘೋಷಣೆ: ನೀವು ನನಗೆ ರಕ್ತ ಕೊಡಿ ನಾನು ನಿಮಗೆ ಸ್ವತಂತ್ರ ಕೊಡುತ್ತೇನೆ
1992 ರಲ್ಲಿ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಲಾಯಿತು
ಜಂಗಮ ಪದಗಳು ನಾನಾ ಅರ್ಥಗಳನ್ನು ಕೊಡುತ್ತ
ಶರಣರ ಚಳವಳಿಯ ವಿರಾಟ್ ದರ್ಶನವನ್ನು ಮಾಡಿಸುತ್ತವೆ. ಜಂಗಮ ಎಂದರೆ ಅನಂತವಾದ ಮತ್ತು ನಿರಂತರವಾದ ಚೈತನ್ಯ.
ಜಂಗಮ ಎಂದರೆ ಚೈತನ್ಯರೂಪಿ ದೇವರು, ಜಂಗಮ ಎಂದರೆ ಚೈತನ್ಯರೂಪಿ ಅರಿವು, ಜಂಗಮ ಎಂದರೆ ಚೈತನ್ಯವನ್ನು
ಒಳಗೊಂಡ ಇಡೀ ವಿಶ್ವ. ಜಂಗಮ ಎಂದರೆ ಜೀವಜಗತ್ತು, ಜಂಗಮ ಎಂದರೆ ಮಾನವ ಸಮಾಜ. ಜಂಗಮ ಎಂದರೆ, ಮಾನವಕುಲ
ಬದುಕಲು ಯೋಗ್ಯವಾಗುವಂಥ ಸಮಾಜ ನಿರ್ಮಾಣಕ್ಕಾಗಿ ಶರಣಸಂಕುಲ ಕಂಡುಕೊಂಡ ಈ ಸತ್ಯವನ್ನು ಸಮರ್ಪಣಾಭಾವದಿಂದ
ಸಾರುತ್ತ ಸಾಗುವ ಶರಣ.
ಓರಿಯೆಂಟಲಿಸಂ-
ಓರಿಯೆಂಟಲಿಸ್ಟ್ ವ್ಯಾಖ್ಯಾನವನ್ನು ನಾವು ಹೇಗೆ ನೋಡಿದರೆ ಚೆನ್ನಾಗಿರುತ್ತದೆ?
ಇದಕ್ಕೆ ಸಂಬಂಧಿಸಿದಂತೆ ಎರಡು ಮಾರ್ಗಗಳಿವೆ: ಇದೊಂದು ಪೂರ್ವದ ಚಿತ್ರಣ ಎಂಬುದು ಮೊದಲನೆಯ ಮಾರ್ಗ,
ಇದು ಪೂರ್ವದ ಕುರಿತಂತೆ ಪಾಶ್ಚಾತ್ಯರು ಹೊಂದಿದ ಅನುಭವದ ಚಿತ್ರಣವಾಗಿದೆ ಎಂಬುದು ಎರಡನೆಯ ಮಾರ್ಗ.
ನಾನು ಎರಡನೆಯ ಸಾಧ್ಯತೆಯನ್ನು ನಂಬುತ್ತೇನೆ. ಪಾಶ್ಚಾತ್ಯ ಸಂಸ್ಕೃತಿಯು ಪೂರ್ವವನ್ನು ಕಷ್ಟಪಟ್ಟು ಅರ್ಥಮಾಡಿಕೊಂಡ
ಪ್ರಕ್ರಿಯೆಯೇ ‘ಓರಿಯಂಟಲಿಸಂ’ ಎಂಬುದನ್ನು ಒಪ್ಪಿಕೊಂಡರೆ, ಅದು (‘ಓರಿಯಂಟಲಿಸಂ’) ಅನುಭವದ ಕುರಿತ
ವ್ಯಾಖ್ಯಾನ ಮಾತ್ರವಲ್ಲದೇ ಆ ಅನುಭವವನ್ನು ಪರ್ಯಾಯಾವಲೋಚಿಸುವ ಹಾಗೂ ಆ ಅನುಭವವನ್ನು ರೂಪಿಸುವ ಕೆಲಸ
ಕೂಡಾ ಆಗಿದೆ. ಈ ಅರ್ಥದಲ್ಲಿ, ಓರಿಯೆಂಟಲಿಸಂ ಎನ್ನುವುದು ಪಾಶ್ಚಾತ್ಯ ಸಂಸ್ಕೃತಿಯ ಅನುಭವದ ವ್ಯಾಖ್ಯಾನವಾಗಿದೆ
ಎಂದರೂ ಸಹಾ ಅದೊಂದು ನೇರವಾದ ವ್ಯಾಖ್ಯಾನವಲ್ಲ. ಏಕೆಂದರೆ ಇದು ಅನ್ಯ ಸಂಸ್ಕೃತಿಗಳ ಕುರಿತಾದದ್ದು ಎನ್ನುವಂತೆ
ಮೇಲ್ನೋಟಕ್ಕೆ ತೋರುತ್ತದೆ. ಒಂದು ನಿರ್ದಿಷ್ಟ ಸಂಸ್ಕೃತಿಗೆ ಸೇರಿದ ವ್ಯಕ್ತಿಗಳ ಅನುಭವವನ್ನು ಸೂಚಿಸುತ್ತದೆ
ಎಂಬರ್ಥದಲ್ಲಿ ಇದನ್ನು ‘ಪಾಶ್ಚಾತ್ಯ’ ಎಂಬುದಾಗಿ ಕರೆಯಬಹುದು. ಪಶ್ಚಿಮೇತರ ಸಂಸ್ಕೃತಿಗಳ ಅನುಭವದ ಕುರಿತ
ಪಶ್ಚಿಮದ ಚಿಂತನಾಕ್ರಮವೇ ಓರಿಯಂಟಲಿಸಂ ಎನ್ನಬಹುದು. ಆದಾಗ್ಯೂ ಕೂಡ ಇದು ಮೇಲ್ನೋಟಕ್ಕೆ ಪೂರ್ವದ ಬಗೆಗಿನ
ವ್ಯಾಖ್ಯಾನವೆಂಬಂತೆ ಕಾಣುತ್ತದೆ. 78 ರಲ್ಲಿ ಪ್ರಕಟವಾದ ಎಡ್ವರ್ಡ್ ಸಯ್ಯದ್ ನ “ ಓರಿಯಂಟಲಿಸಂ”
ಎಡ್ವರ್ಡ್ ಸೈದ್- ಜಾಗತಿಕ ಮಟ್ಟದ ಚಿಂತಕರಲ್ಲಿ ಎಡ್ವರ್ಡ್ ಸೈದ್ ಪ್ರಮುಖನಾಗಿದ್ದಾನೆ. ಇವನು ೧೯೩೫ ರಲ್ಲಿ ಪ್ಯಾಲಿಸ್ತೇನ್
ದೇಶದಲ್ಲಿ ಜೆರುಸೆಲಮ್ ನ ,ಮುಸ್ಲಿಂ ಕುಟುಂಬವೊಂದರಲ್ಲಿ ಕ್ರಿಶ್ಚಿಯನ್ ದಂಪತಿಗಳ ಮಗನಾಗಿ ಹುಟ್ಟಿದನು.ಇವನ
ತಂದೆಯ ಹೆಸರು ವಾದಿ ಇಬ್ರಾಹೀಂ, ತಾಯಿ ಹಿಲ್ಡಾ. ಪ್ರಾರಂಭದಿಂದಲು ಸೈದ್ ದ್ವಂದ್ವಗಳ ನಡುವೆಯೆ ಬೆಳೆದನು.ಸೈದ್
ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಇಂಗ್ಲೀಶ್ ಮತ್ತು ತೌಲನಿಕ ಸಾಹಿತ್ಯದ ಪ್ರಾಧ್ಯಾಪಕನಾಗಿದ್ದನು.ಸಾಹಿತ್ಯಿಕ
ಸಿದ್ಧಾಂತಿಯೂ ಹಾಗೂ ಜನಪರನಾದ ಈತನು ವಸಾಹತ್ತೋತ್ತರ ಕ್ಷೇತ್ರದ ವಿಮರ್ಶಾ ಸಿದ್ಧಾಂತದ ಪ್ರತಿಪಾದಕನು
ಹೌದು.ಪತ್ರಕರ್ತ ರಾಬರ್ಟ ಫಿಸ್ಕ ರವರ ಅಭಿಪ್ರಾಯದಂತೆ ಪ್ಯಾಲಿಸ್ತೇನಿಯನ್ನರ ರಾಜಕೀಯ ಮತ್ತು ಮಾನವ
ಹಕ್ಕುಗಳ ಪ್ರತಿಪಾದಕ ಎಡ್ವರ್ಡ್ ಸೈದ್.ಸಾಂಸ್ಕೃತಿಕ ವಿಮರ್ಶಕ, ಶಿಕ್ಷಣತಜ್ಞ ಮತ್ತು ಬರಹಗಾರನಾದ ಈತ
ಪೌರಸ್ತ್ಯವಾದ[೧೯೭೮] ಎಂಬ ಪುಸ್ತಕದ ಮೂಲಕ ತುಂಬಾ ಹೆಸರುವಾಸಿಯಾದನು.ಪ್ರಾತಿನಿಧಿಕತ್ವದ ವಿವರಣೆಗಳು
ಪೌರಸ್ತ್ಯವಾದಕ್ಕೆ ಆಧಾರಗಳು.ಈತನ ಪೌರಸ್ತ್ಯವದದ ಮರುವ್ಯಾಖ್ಯಾನದಂತೆ ಪೌರ್ವಾತ್ಯ ರಾಷ್ತ್ರಗಳ ಸಂಸ್ಕೃತಿಗಳನ್ನು
ಕುರಿತಾಗಿ ಪಶ್ಚಿಮ ರಾಷ್ಟ್ರಗಳ ಅಧ್ಯಯನ ಮತ್ತು ಸಾಮಾನ್ಯವಾಗಿ ಪೌರಸ್ತ್ಯವಾದ ಒಂದು ಚೌಕಟ್ಟಾಗಿದೆ
ಈ ಮೂಲಕ ಪಶ್ಚಿಮವೂ ಪೂರ್ವವನ್ನು ಯಾವ ರೀತಿಯಾಗಿ ಅವಲೋಕಿಸುತ್ತದೆ ಮತ್ತು ಪ್ರತಿನಿಧಿಸುತ್ತದೆ ಎಂಬುದಾಗಿದೆ
ಎಡ್ವರ್ಡ್ ಸೈದ್ ನ ಪ್ರಮುಖ ಕೃತಿಗಳು-
ಈ ಕೃತಿಯು ಸೈದನಿಗೆ
ಜಾಗತಿಕ ಕೀರ್ತಿಯನ್ನು ತಂದುಕೊಟ್ಟಿದೆ. ಈ ಕೃತಿಯು ೧೯೭೮ರಲ್ಲಿ ಪ್ರಕಟವಾಯಿತು. ಈ ಕೃತಿಯಲ್ಲಿ ಮೂರು
ಅದ್ಯಾಯಗಳಿವೆ ೧. ಪೌರಸ್ತ್ಯ ಚಿಂತನೆಯ ವ್ಯಾಖ್ಯಾನ ಮತ್ತು ವ್ಯಾಪ್ತಿ ೨.ಪೌರಸ್ತ್ಯ ಚಿಂತನೆಯ ರಚನೆಗಳು
ಮತ್ತು ಮರು ರಚನೆಗಳು ೩.ಪೌರಸ್ತ್ಯ ಚಿಂತನೆ ಮೂಲಥಃ ಗ್ರಹಿಕೆಯ ಸ್ವರೂಪವನ್ನು ವಿಶ್ಲೇಷಿಸುವ ಈ ಕೃತಿಯು
ಅಸಮಾನ ಅಧಿಕಾರದ ಸಂಸ್ಕೃತಿಗಳು ಅಥವಾ ಸಮುದಾಯಗಳು ಎದುರಾದಾಗ ಹೇಗೆ ಗ್ರಹಿಸುತ್ತವೆ ಮತ್ತು ಅವುಗಳ
ಉದ್ದೇಶವೇನು ಎಂಬ ಪ್ರಶ್ನೆಗಳಿಗೆ ಈ ಕೃತಿಯಲ್ಲಿ ಮಂಡಿಸಿದ್ದಾನೆ. ಮನುಷ್ಯನ ಅನುಭವಗಳ ಸಮಸ್ಯೆಗಳನ್ನು
ಪ್ರಸ್ತಾಪಿಸುವಾಗ ಸಂಸ್ಕೃತಿ ಹೇಗೆ ರೂಪಿಸಲ್ಪಡುತ್ತದೆ,ವಿಭಿನ್ನ ಸಂಸ್ಕೃತಿ ಎಂದರೇನು,ಜನಾಂಗ\ ಧರ್ಮ
\ ನಾಗರೀಕತೆ ಎಂಬ ಮುಂತಾದ ವಿಷಯಗಳ ಬಗ್ಗೆ ಚರ್ಚಿಸಿದ್ದಾನೆ. ಎರಡು ಸಮಾನ ಶಕ್ತಿಯುಳ್ಳ ಸಂಸ್ಕ್ರತಿಗಳು
ಮುಖಾಮುಖಿಯಾದಾಗ ಉಂಟಾಗುವ ಪರಿಣಾಮವನ್ನು ವಿವರಿಸುವ ಪರಿಕಲ್ಪನೆಯೇ ಪೌರಸ್ತ್ಯವಾದ. ಇದು ತಾತ್ವಿಕ
ನೆಲೆಯಲ್ಲಿ ಪೂರ್ವ ಮತ್ತು ಪಶ್ಚಿಮಗಳ ನಡುವಿನ ಭಿನ್ನತೆಯನ್ನು ಮತ್ತು ವೈರುದ್ಯವನ್ನು ಒಪ್ಪಿಕೊಂಡು
ಅವುಗಳ ರಾಜಕೀಯ ,ಸಾಮಜಿಕ ,ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ರಚನೆಗಳ ತೌಲನಿಕ ವಿಮರ್ಶೆ ಮತ್ತು ವ್ಯಾಖ್ಯಾನಗಳನ್ನು
ಕೈಗೊಳ್ಳುವುದು ಜೊತೆಗೆ ಪೌರಸ್ತ್ಯವಾದ ವೆಂಬುದು ಒಂದು ಸಂಸ್ಥೆ,ಪೂರ್ವ ವನ್ನು ಕುರಿತು ಪಶ್ಚಿಮವು
ಶತಮಾನಗಳ ಕಾಲ ರಚಿಸಿರುವ ಇಡೀ ವಾಜ್ಜ್ಞಯವನ್ನು ನಿಯಂತ್ರಿಸುವ ಒಂದು ಅಮೂರ್ತ ಸಂಸ್ಥೆ.ಈ ವರ್ಗವು ಪಾಶ್ಚಿಮಾತ್ಯ
ಸಾಹಿತಿಗಳು, ಇತಿಹಾಸಜ್ಞರು ಸಮಾಜಶಾಸ್ತ್ರಜ್ಞರು ಮತ್ತು ರಾಜಕೀಯ ಚಿಂತಕರನ್ನು ಒಳಗೊಂಡಿದೆ.ವಿಲಿಯಂ
ಜೋನ್ಸ್, ಮ್ಯಾಕ್ಸ್ ಮುಲ್ಲರ್, ಬ್ಯೂಹ್ಲನ್ ಮುಂತಾದವರು ಜರ್ಮನಿಯ ನವ ವೈಯಾಕರಣಿಗಳನ್ನು ಓರಿಯಂಟಲಿಸ್ಟ್
ಎಂದು ಕರೆಯಬಹುದು.ಪೌರಸ್ತ್ಯವಾದದಲ್ಲಿಯೂ ಸಹ ಎರಡು ವಿಧಗಳನ್ನು ಕಾಣಬಹುದು ಅವುಗಳೇಂದರೆ ೧.ಗೋಚರ ೨.ಆಗೋಚರ
ಪೌರಸ್ತ್ಯ ಚಿಂತನೆಯ ವ್ಯಾಖ್ಯಾನ ಮತ್ತು ವ್ಯಾಪ್ತಿಯಲ್ಲಿ ಪೌರಾತ್ಯ ರಾಷ್ಟ್ರಗಳ ಸಾಮಾಜಿಕ ವ್ಯವಸ್ಥೆ,
ಧರ್ಮ, ಸಾಹಿತ್ಯ, ಸಂಸ್ಕೃತಿಗಳಲ್ಲಿ ವಿಧ್ವಾಂಸರು ತಮ್ಮನ್ನು ತೊಡಗಿಸಿಕೊಳ್ಳುವುದರ ಬಗ್ಗೆ ಹೇಳಿದ್ದಾನೆ.
ಪೌರಸ್ತ್ಯ ಚಿಂತನೆಯೆಂದರೆ ಪೂರ್ವವನ್ನು ಕುರಿತು ಪಶ್ಚಿಮವು ಶತಮಾನಗಳ ಕಾಲ ರಚಿಸಿರುವ ಇಡೀ ಮಾತುಗಾರಿಕೆಯನ್ನು
ನಿಯಂತ್ರಿಸುವ ಒಂದು ಅಮೂರ್ತ ಸಂಸ್ಥೆ ಎಂದಿದ್ದಾನೆ.ಸಾಮ್ರಾಜ್ಯಗಳು ಅಳಿದ ಕೂಡಲೇ ಸಾಮ್ರಾಜ್ಯಶಾಹೀ
ಅಳಿಯುವುದಿಲ್ಲ ಎಂಬುದು ಸೈದ್ ನ ಅಭಿಪ್ರಾಯ. ಈ ಒಂದು ಕೃತಿ ೨೬ ಕ್ಕೂ ಹೆಚ್ಚಿನ ಭಾಷೆಗಳಿಗೆ ಭಾಷಾಂತರವಾಗಿದೆ.
ಬ್ಯಾಪ್ಟಿಸಮ್(ದೀಕ್ಷಾಸ್ನಾನ, ಜ್ಞಾನಸ್ನಾನ)
ಕ್ರೈಸ್ತಧರ್ಮದಲ್ಲಿ, ಬ್ಯಾಪ್ಟಿಸಮ್ (ಗ್ರೀಕ್ನಿಂದ
ಬ್ಯಾಪ್ಟೈಜೋ "ಮುಳುಗಿಸುವುದು", "ಶುದ್ಧೀಕರಣವನ್ನು ನಡೆಸುವುದು", ಅರ್ಥಾತ್, "ಸಂಸ್ಕಾರ ಸ್ನಾನ") ಎಂಬುದು ಒಂದು ಧಾರ್ಮಿಕ ವಿಧಿಯ ಆಚರಣೆಯಾಗಿದ್ದು, ಇದರಲ್ಲಿ ನೀರನ್ನು
ಬಳಸುವುದರ ಮೂಲಕ ವ್ಯಕ್ತಿಯೊಬ್ಬನಿಗೆ ಚರ್ಚ್ನ
ಸದಸ್ಯತ್ವವನ್ನು ನೀಡಲಾಗುವುದು. ಆಂಗ್ಲ ಭಾಷೆಯಲ್ಲಿ "ಬ್ಯಾಪ್ಟಿಸಮ್" ಎಂಬ ಪದವನ್ನು ವ್ಯಕ್ತಿಗೆ
ದೀಕ್ಷೆ ನೀಡುವ, ಶುದ್ಧೀಕರಿಸುವ ಅಥವಾ ಹೊಸದಾಗಿ ನಾಮಕರಣ ಮಾಡುವ ಯಾವುದೇ ಧರ್ಮಾಚರಣೆ, ವಿಚಾರಣೆ ಅಥವಾ
ಅನುಭವವನ್ನು ಉಲ್ಲೇಖಿಸುವ ಅರ್ಥದಲ್ಲಿ ಬಳಸಲಾಗುತ್ತದೆ