Wednesday, 29 January 2014

ಭಾವಗೀತೆಗಳು

PÀ£ÀßqÀ rArªÀĪÀ

ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯ ಶಿವ

ಸತ್ತಂತಿಹರನು ಬಡಿದೆಚ್ಚರಿಸು
ಕಚ್ಚಾಡುವರನು ಕೂಡಿಸಿ ಒಲಿಸು
ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು
ಒಟ್ಟಿಗೆ ಬಾಳುವ ತೆರದಲಿ ಹರಸು ।। ಬಾರಿಸು ।।

ಕ್ಷಯಿಸೆಶಿವೇತರ ಕೃತಿ ಕೃತಿಯಲ್ಲಿ
ಮೂಡಲಿ ಮಂಗಳ ಮತಿಮತಿಯಲ್ಲಿ
ಕವಿ ಋಷಿ ಸಂತರ ಆದರ್ಶದಲಿ
ಸರ್ವೋದಯವಾಗಲಿ ಸರ್ವರಲಿ ।। ಬಾರಿಸು ।।

- - ಕುವೆಂಪು




ಮಾವನ ಮನೆಯಲ್ಲಿ


ರಾಯರು ಬಂದರು ಮಾವನ ಮನೆಗೆ
    
ರಾತ್ರಿಯಾಗಿತ್ತು;
ಹುಣ್ಣಿಮೆ ಹರಸಿದ ಬಾನಿನ ನಡುವೆ
    
ಚಂದಿರ ಬಂದಿತ್ತು. - ತುಂಬಿದ
    
ಚಂದಿರ ಬಂದಿತ್ತು.

ಮಾವನ ಮನೆಯಲಿ ಮಲ್ಲಿಗೆ ಹೂಗಳ
    
ಪರಿಮಳ ತುಂಬಿತ್ತು.
ಬಾಗಿಲ ಬಳಿ ಕಾಲಿಗೆ ಬಿಸಿ ನೀರಿನ
    
ತಂಬಿಗೆ ಬಂದಿತ್ತು - ಒಳಗಡೆ
    
ದೀಪದ ಬೆಳಕಿತ್ತು.

ಘಮಘಮಿಸುವ ಮೃಷ್ಟಾನ್ನದ ಭೋಜನ
    
ರಾಯರ ಕಾದಿತ್ತು.
ಬೆಳ್ಳಿಯ ಬಟ್ಟಲ ಗಸಗಸೆ ಪಾಯಸ
    
ರಾಯರ ಕರೆದಿತ್ತು - ಭೂಮಿಗೆ
    
ಸ್ವರ್ಗವೆ ಇಳಿದಿತ್ತು.

ಚಪ್ಪರಗಾಲಿನ ಮಂಚದ ಮೇಗಡೆ
    
ಮೆತ್ತನೆ ಹಾಸಿತ್ತು.
ಅಪ್ಪಟ ರೆಸಿಮೆ ದಿಂಬಿನ ಅಂಚಿಗೆ
    
ಚಿತ್ರದ ಹೂವಿತ್ತು. - ಪದುಮಳು
    
ಹಾಕಿದ ಹೂವಿತ್ತು.

ಚಿಗುರೆಲೆ ಬಣ್ಣದ ಅಡಕೆಯ ತಂದಳು
   
ನಾದಿನಿ ನಗುನಗುತ;
ಬಿಸಿಬಿಸಿ ಹಾಲಿನ ಬಟ್ಟಲ ತಂದರು
   
ಅಕ್ಕರೆಯಲಿ ಮಾವ - ಮಡದಿಯ
   
ಸದ್ದೇ ಇರಲಿಲ್ಲ.

ಮಡದಿಯ ತಂಗಿಯ ಕರೆದಿಂತೆಂದರು;
    "
ಅಕ್ಕನ ಕರೆಯಮ್ಮ"
ಮೆಲುದನಿಯಲಿ ನಾದಿನಿ ಇಂತೆಂದಳು;
    "
ಪದುಮಳು ಒಳಗಿಲ್ಲ" - ನಕ್ಕಳು.
   
ರಾಯರು ನಗಲಿಲ್ಲ.

ಏರುತ ಇಳಿಯುತ ಬಂದರು ರಾಯರು
   
ದೂರದ ಊರಿಂದ.
ಕಣ್ಣನು ಕಡಿದರು ನಿದ್ದೆಯು ಬಾರದು
   
ಪದುಮಳು ಒಳಗಿಲ್ಲ - ಪದುಮಳ
   
ಬಳೆಗಳ ದನಿಯಿಲ್ಲ.

ಬೆಳಗಾಯಿತು; "ಸರಿ, ಹೊರಡುವೆ"ನೆಂದರು
   
ರಾಯರು ಮುನಿಸಿನಲಿ.
ಒಳಮನೆಯಲಿ "ನೀರಾಯಿತು!" ಎಂದಳು
   
ನಾದಿನಿ ರಾಗದಲಿ. "ಯಾರಿಗೆ?"
   
ಎನ್ನಲು ಹರುಷದಲಿ.
ಪದುಮಳು ಬಂದಳು ಹೂವನು ಮುಡಿಯುತ
   
ರಾಯರ ಕೋಣೆಯಲಿ.
                                                        -
ಕೆ. ಎಸ್. ನರಸಿಂಹ ಸ್ವಾಮಿ

ಸಂಜೆಯ ರಾಗಕೆ ಬಾನು ಕೆಂಪೇರಿದೆ
ಸಂಜೆಯ ರಾಗಕೆ ಬಾನು ಕೆಂಪೇರಿದೆ
ತಿಂಗಳು ಮೂಡಿ ಬೆಳಕಿನ ಕೋಡಿ ಚೆಲ್ಲಾಡಿದೆ,
ಈಗ ರಂಗೇರಿದೆ ||

ಮರಗಿಡ ನೆಲದ ಮೇಲೆ ನೆರಳನು ಹಾಸಿದೆ
ಹೂಗಳ ದಳಗಳ ನಡುವೆ ನಿನ್ನದೇ ಬೆರಳಿದೆ ||

ಗಾಳಿಯ ಜೊತೆಯ ಗಂಧವು ನಿನ್ನನ್ನು ಸವರಿದೆ
ಒಳಗೂ ಹೊರಗೂ ವ್ಯಾಪಿಸಿ ಯೌವ್ವನ ಕೆರಳಿದೆ ||

ಕೊಳದಲಿ ಮೂಡಿದ ಬಿಂಬವು ಹೂಗಳ ಮರೆಸಿದೆ
ದಳದಲಿ ಎಂತಹ ಕನಸಿನ ಲೋಕವು ತೆರೆದಿದೆ ||

ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ

ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ
ಎಲ್ಲಾ ಸೇರಿ ನನ್ನ ಬಾಯಿಗೆ ಬೆಣ್ಣೆಯ ಮೆತ್ತಿದರಮ್ಮ

ನೀನೆ ನೋಡು ಬೆಣ್ಣೆಗಡಿಗೆ ಸೂರಿನ ನೆಲುವಲ್ಲಿ
ಹೇಗೆ ತಾನೇ ತೆಗೆಯಲಿ ಅಮ್ಮ ನನ್ನ ಪುಟ್ಟ ಕೈಗಳಲ್ಲಿ ||

ಶಾಮ ಹೇಳಿದ ಬೆಣ್ಣೆ ಮೆತ್ತಿದ ತನ್ನ ಬಾಯಿ ಒರೆಸುತ್ತಾ
ಬೆಣ್ಣೆ ಒರೆಸಿದ ಕೈಯ ಬೆನ್ನ ಹಿಂದೆ ಮರೆಸುತ್ತಾ ||

ಎತ್ತಿದ ಕೈಯ ಕಡಗೋಲನ್ನು ಮೂಲೆಲಿಟ್ಟು ನಕ್ಕಳು ಗೋಪಿ
ಸೂರದಾಸ ಪ್ರಿಯಶಾಮನ ಶಾಮನ
ಸೂರದಾಸ ಪ್ರಿಯಶಾಮನ ಶಾಮನ ಮುತ್ತಿಟ್ಟು ನಕ್ಕಳು ಗೋಪಿ ||

                                                                          -
ಹೆಚ್. ಎಸ್. ವೆಂಕಟೇಶ ಮೂರ್ತಿ

Friday, 24 January 2014

ಜಪವ ಮಾಡು

d¥À

F UÉúÀ PÁt®Ä §®ÄZÀAzÀ
EzÀÄ §»gÀAUÀ ±ÀÄa CAvÀgÁ¼ÀzÀ°è
ªÀiÁ°£Àå¢AzÀ ºÉÆ®¸ÁVzÉ.. .
F ºÉÆ®¸À£ÀÄß vɼÉzÀÄ ¤ªÀÄð®
ªÁUÀ®Æ D ¨sÀUÀªÀAvÀ£À £ÁªÀÄ

ªÀ d¦¸ÀĪÀÅzÉÆAzÉ ªÀiÁUÀðªÀAiÀÄå .....

ಲೋಕಪ್ರೇಮ

http://judibug007friends.files.wordpress.com/2009/09/world-go-round.png  
   ¯ÉÆÃPÀ¥ÉæÃªÀÄ

F ¯ÉÆÃPÀªÀÄA¢AiÀÄ ¸ÉßúÀ-¥ÉæÃªÀÄUÀ½¸À®Ä
CºÀA vÉÆgÉzÀÄ £ÁªÉà ªÉÆzÀ®Ä ªÀÄÄUÀļÀßUÀÄvÁÛ
¸ÀªÀĸÀÛgÉÆqÀ£É DwäÃAiÀÄvɬÄAzÀ ªÀiÁvÀ£Ár, 
£ÀUÉAiÀÄ PÀqÀ°UÉ CªÀgÀ£ÀÄß zÀÆqÀĪÀ, CªÀgÀ AiÉÆÃUÀPÉëêÀĪÀ 
PÉüÀÄvÁÛ.. ..¤ªÀÄä ¦æÃwAiÀÄ C©üªÀåPÀÛUÉÆ½¸ÀĪÀ ªÀÄÆ®PÀ ErÃ
dUÀvÉÛà ¤ªÀÄä£ÀÄß UɼÉAiÀÄ£ÀAvɨsÁ«¹, 
               J®ègÀÆ ¤£Àß ¦æÃw¸ÀĪÀªÀgÁUÀĪÀgÀÄ..... .. N E¤AiÀÄ